ಕಾರವಾರ : ಅರ್ಬನ್ ಬ್ಯಾಂಕ್ ಹಣದ ಗೋಲ್ಮಾಲ್ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ನೀಡಿದ ದೂರಿಗೆ ಇದುವರೆಗೆ ಯಾವುದೇ FIR ಆಗಿಲ್ಲ. ಆದರೆ ಗ್ರಾಹಕರೊಬ್ಬರೂ ನೀಡಿದ ಕಂಪ್ಲೇಂಟ್ FIR ಆಗಿದೆ.
ಬ್ಯಾಂಕಿನ ಗ್ರಾಹಕರಾದ ದತ್ತಾ ಎಂಬುವವರು ತಮ್ಮ ಎಸ್ಬಿ ಖಾತೆಯಲ್ಲಿರುವ 406623 ರೂ. ಹಣವನ್ನು ನೀಡಲು ಚೆಕ್ ಮುಖಾಂತರ ಬಿಡುಗಡೆಗೊಳಿಸುವಂತೆ ಮೇ 31ರಂದು ಕೇಳಿದ್ದರು. ಸಿಬ್ಬಂದಿಗಳು ಅಷ್ಟು ಹಣವಿಲ್ಲ ಎಂದು ಬ್ಯಾಂಕ್ ನಷ್ಟದಲ್ಲಿದೆ ಎಂದು ಸಿಬ್ಬಂದಿಗಳು ಹೇಳಿದಾಗ ತುರ್ತಾಗಿ ಮನೆ ರಿಪೇರಿ ಮತ್ತು ಅನಾರೋಗ್ಯದ ಕಾರಣದಿಂದ ಹಣ ಬೇಕೆಂದು ಮ್ಯಾನೇಜರ್ ವಾಸುದೇವ್ ಪಂಗಮ್ ಬಳಿ ಲೆಟರ್ ಮೂಲಕ ಕೇಳಿದಾಗ ಬ್ಯಾಂಕ್ ನಷ್ಟದಲ್ಲಿದೆ ಎಂದು ಪತ್ರ ಬರೆದಿದ್ದಾರೆ.
ಹೀಗಾಗಿ ಬ್ಯಾಂಕ್ ವ್ಯವಸ್ಥಾಪಕರ ಕಾರ್ಯ ವೈಖರಿಯಿಂದ ಬೇಸತ್ತು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 24 ವರ್ಷದಿಂದ ನಂಬಿಕೆಯಿಂದ ಹಣ ಇಟ್ಟು ವ್ಯವಹಾರ ಮಾಡಿದ್ದೇನೆ. ಬ್ಯಾಂಕಿನವರು ಹಣ ನೀಡದ ಕಾರಣಕ್ಕೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಸಂಭಂದ 406, 420 ಸೆಕ್ಷನ್ ನಡಿ ದೂರು ದಾಖಲು ಮಾಡಲಾಗಿದೆ ಎಂದು ಎನ್ ದತ್ತಾ ತಿಳಿಸಿದ್ದಾರೆ.
ಆದರೆ ದೂರು ದಾಖಲಾಗಿ ಆರು ದಿನ ಕಳೆದರು ಸಂಬಂಧಪಟ್ಟವರ ವಿಚಾರಣೆ ಮಾಡದೇ ವಿಳಂಭ ಮಾಡುತ್ತಿದ್ದಾರೆ. ಬಡವರು, ಮೀನುಗಾರರು, ಬೀದಿ ವ್ಯಾಪಾರಿಗಳು, ದೇವಸ್ಥಾನದವರ ಇಟ್ಟ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಗೃಹ ಮಂತ್ರಿಗಳು ಉನ್ನತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮ್ಯಾನೇಜರ್, ಸಿಬ್ಬಂದಿಗಳು, ಡೈರೆಕ್ಟರ್ ಅವರ ಆಸ್ತಿ ಮುಟ್ಟುಗೋಲು ಮಾಡಿ ಅಕೌಂಟ್ ತಡೆ ಹಿಡಿಯಬೇಕು. ಬ್ಯಾಂಕಿನಲ್ಲಿ 2021-22 ರಲ್ಲಿ ಅವ್ಯವಹಾರ ಆಗಿದೆ. ಹಿಂದೆ 21 ಲಕ್ಷ ಲಾಭದಲ್ಲಿದೆ ಎಂದು ತೋರಿಸಿದ ಬ್ಯಾಂಕ್ ಎರಡು ವರ್ಷದಲ್ಲಿ 51ಕೋಟಿ ನಷ್ಟ ಹೇಗಾಯಿತು ಎಂದು ದತ್ತಾ ಪ್ರಶ್ನಿಸಿದ್ದಾರೆ.
ಕಾರವಾರ ಅರ್ಬನ್ ಬ್ಯಾಂಕ್ ನೂರಾರು ವರ್ಷಗಳಿಂದ ಇದ್ದರೂ ಸ್ವಾರ ಕುಟುಂಬದವರು ಡೈರೆಕ್ಟರ್ ಆಗಿ ಇದ್ದೂ ಅವರು ಸಾಕಷ್ಟು ವ್ಯವಹಾರ ಮಾಡಿದ್ದಾರೆಂದು ದೂರಿದ ಗ್ರಾಹಕ ದತ್ತಾ ಮ್ಯಾನೇಜರ್ ಮತ್ತು ಡೈರೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಕಾರವಾರ ಅರ್ಬನ್ ಬ್ಯಾಂಕ್ ವಿಚಾರದಲ್ಲಿ ಗ್ರಾಹಕರ ಮೊದಲ ದೂರಾಗಿದ್ದು, ಇನ್ನೂ ಯಾರ್ಯಾರು ದೂರು ನೀಡ್ತಾರೋ ಕಾದು ನೋಡಬೇಕು.