ಕಾರವಾರ(Karwar) : ಕೈಗಾ(Kaiga) ಅಣುವಿದ್ಯುತ್ ಸ್ಥಾವರದ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧನೋರ್ವ(Soldier) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹರವಿಂದರ್ ಕುಮಾರ್ ರಾಮ್ (28 )ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ. ಮೃತ ಯೋಧ ಬಿಹಾರ ಮೂಲದವನಾಗಿದ್ದು (Bihar Native) ಕಳೆದ ಎರಡು ವರ್ಷದಿಂದ ಮಲ್ಲಾಪುರದ ಸಿಐಎಸ್ಎಪ್ (CISF) ಕ್ಯಾಂಪಿನಲ್ಲಿ ಕರ್ತವ್ಯದಲ್ಲಿದ್ದ. ತಾನು ಬಳಸುತ್ತಿದ್ದ ರೈಪಲ್ ನಿಂದಲೇ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಸಾವಿಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಮಲ್ಲಾಪುರ ಪೊಲೀಸರು (Mallapur Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ಶಿರೂರು ದುರಂತ. ಎರಡು ಕುಟುಂಬಗಳಿಗೆ ಐದು ಲಕ್ಷ ಪರಿಹಾರ
ಭಟ್ಕಳ ಪೊಲೀಸರ ಮಿಂಚಿನ ಕಾರ್ಯಾಚರಣೆ