ಭಟ್ಕಳ : ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮನನೊಂದು ಹೆತ್ತ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಯಲ್ವಡಿಕವೂರ ಗ್ರಾಮದ ಗೋರಿಕಲ್ಲ ಮನೆಯಲ್ಲಿ ನಡೆದಿದೆ.

ಕೃಷ್ಣಮ್ಮ ನಾರಾಯಣ ನಾಯ್ಕ ( 55),  ಮಾದೇವಿ ದೊಡ್ಡಯ್ಯ ನಾಯ್ಕ (37) ಮೃತರು ಎಂದು ಗೊತ್ತಾಗಿದೆ.

14 ವರ್ಷದ ಹಿಂದೆ ಮಾದೇವಿ ದೊಡ್ಡಯ್ಯ ನಾಯ್ಕ ಮದುವೆಯಾಗಿದ್ದರು. ಬಳಿಕ  12 ವರ್ಷಗಳಿಂದ ತನ್ನ ತಾಯಿ ಮನೆಯ ಸಮೀಪದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಈಕೆಗೆ ಓರ್ವ ಮಗಳು ಹಾಗೂ ಓರ್ವ ಮಗನಿದ್ದಾನೆ. ಇಂದು ಸಂಬಂಧಿಕರ ಮದುವೆ ಇದ್ದ  ಕಾರಣ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ಮಾದೇವಿ ನೇಣಿಗೆ ಶರಣಾಗಿದ್ದಾಳೆ.
ಮಗಳ ಸಾವನ್ನ ನೋಡಿದ ತಾಯಿ ಕೂಡ ಅಲ್ಲೇ ಸಮೀಪವಿದ್ದ ತಮ್ಮ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.