ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ಒಡ ಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದ ಘಟನೆ ಶಿರಸಿ ತಾಲೂಕಿನ ಹುತ್ಗಾರನಲ್ಲಿ ನಡೆದಿದೆ.
ತ್ಯಾಗರಾಜ ಗಣಪತಿ ಮುಕ್ರಿ (30) ಕೊಲೆಯಾದ ದುರ್ದೈವಿ. ಸಹೋದರನೇ ಕೊಲೆಗೈದಿದ್ದಾನೆ. ಶಿವರಾಜ ಗಣಪತಿ ಮುಕ್ರಿ ಕೊಲೆ ಮಾಡಿದ ಆರೋಪಿ.
ಕ್ಷಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಶಿವರಾಜ ತನ್ನ ಅಣ್ಣನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಪ್ಪಿಸಲು ಬಂದ ಹೇಮಾವತಿ ತ್ಯಾಗರಾಜ ಮುಕ್ರಿ ಹಾಗು ರೋಹಿತ ಮಂಜುನಾಥ ಮುಕ್ರಿ ಮೇಲೂ ಹಲ್ಲೆ ನಡೆಸಿದ್ದಾನೆ.
ಸಿಪಿಆಯ್ ಸೀತಾರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅರೋಪಿ ಶಿವರಾಜ ಗಣಪತಿ ಮುಕ್ರಿ (24) ಯನ್ನ ಶಿರಸಿ ತಾಲೂಕಿನ ಹುಲೇಕಲ್ ಬಸ್ ನಿಲ್ದಾಣದ ಹತ್ತಿರ ಬಂಧಿಸುವಲ್ಲಿ ಗ್ರಾಮೀಣ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ಸರ್ಕಾರಿ ಬಸ್ಗಳ ನಡುವೆ ಅಪಘಾತ. ಐವರಿಗೆ ಗಾಯ.
1