ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಇಸ್ಲಾಮಾಬಾದ್(Islamabad) : ಪಾಕಿಸ್ತಾನ(Pakistana) ವಿರುದ್ಧ ಭಾರತ ಕೆಲ ಗಂಟೆಗಳಲ್ಲಿ ದಾಳಿ ಮಾಡುಬಹುದೆಂಬ ಭಯದ ನಡುವೆ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)ಗೆ ಅನಾರೋಗ್ಯದಿಂದ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯ(Ravalpindi Military Hospital) ರಹಸ್ಯ ದಾಖಲೆಯಿಂದ ಗೊತ್ತಾಗಿದೆ. ಜಮ್ಮು (Jammu) ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ(Kashmir Pehalgam) ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತಳೆದಿದೆ. ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ(Pakistanis) ದೇಶವನ್ನು ತೊರೆಯುವಂತೆ ಆದೇಶಿಸಲಾಗಿತ್ತು. ಭಾರತ ಸರ್ಕಾರದ ಧೀಡಿರ್ ನಿರ್ಧಾರಗಳಿಂದ ಕೋಪಗೊಂಡ ಪಾಕಿಸ್ತಾನವು ಸಮರದ ಸವಾಲು ಹಾಕಿದೆ. ಆದರೆ ಭಾರತವು ಇನ್ನೂ ಸೂಕ್ತ ಉತ್ತರವನ್ನು ನೀಡುವ ಕಾರ್ಯತಂತ್ರವನ್ನು ರೂಪಿಸುತ್ತಿದೆ.
ಈ ನಡುವೆ ಪಾಕಿಸ್ತಾನಿ ಪ್ರಧಾನಿ(Pakistan Prime Minister) ಶಹಬಾಜ್ ಷರೀಫ್ (Shahbaz Sharif) ಆತಂಕ ಮತ್ತು ದಿಗ್ಬ್ರಮೆಯಿಂದ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಒಸಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ನೋಡಿ ಪಾಕಿಸ್ತಾನಿ ಪ್ರಧಾನಿ ಭಯಭೀತರಾಗಿದ್ದಾರೆಂದು ಹೇಳಲಾಗುತ್ತಿದೆ. ರಹಸ್ಯ ದಾಖಲೆಗಳು ಈಗಾಗಲೇ ಸೋರಿಕೆಯಾಗಿವೆ.
ಏಪ್ರಿಲ್ 27ರಂದು ಪ್ರಧಾನಿ ಶೆಹಬಾಜ್ ಅವರು ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಮಾಧ್ಯಮಗಳು ಮತ್ತು ಜನರಿಗೆ ಪ್ರಧಾನಿ ಬಗ್ಗೆ ಮಾಹಿತಿ ನೀಡಬಾರದು ಎಂದು ತಿಳಿಸಲಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕ್ ವಿರುದ್ಧ ಕಠಿಣ ನಿಲುವು ತಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಪ್ರಧಾನಿಯ ಸ್ಥಿತಿ ಕೆಟ್ಟದಾಗಿದೆ. ಪಾಕಿಸ್ತಾನ ಭಯಭೀತವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಮೊದಲು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು, ನಂತರ ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸಿತು ಮತ್ತು ಅಟ್ಟಾರಿ ಗಡಿಯನ್ನು ಸಹ ಮುಚ್ಚಿತು. ಇದರೊಂದಿಗೆ, ಅನೇಕ ದೇಶಗಳು ಭಾರತವನ್ನು ಬೆಂಬಲಿಸುತ್ತಿವೆ. ಮತ್ತೊಂದೆಡೆ, ಪಾಕಿಸ್ತಾನದ ನೀಚ ಕೃತ್ಯವನ್ನು ಪ್ರಪಂಚದಾದ್ಯಂತ ಟೀಕಿಸಲಾಗುತ್ತಿದೆ. ಇದರಿಂದ ಪ್ರಧಾನಿ ಶೆಹಬಾಜ್ ಕಂಗಲಾಗಿದ್ದಾರೆ ಎನ್ನಲಾಗುತ್ತಿದೆ.