ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) :  ಎರಡು ಕಾಲಿಲ್ಲದ ವಿಶೇಷ ಚೇತನ ವ್ಯಕ್ತಿಯೋರ್ವ ಬಾಣಂತಿ ಮಹಿಳೆಗೆ ತುರ್ತು ರಕ್ತದಾನ(Blood Donate) ಮಾಡುವ ಮೂಲಕ ಮಾನವೀಯತೆ(Humanity) ಮೆರೆದ ಘಟನೆ ನಡೆದಿದೆ.

ದಾಂಡೇಲಿ(Dandeli) ನಗರದ ವನಶ್ರೀ ನಗರದಲ್ಲಿ ಬದುಕಿಗಾಗಿ ಸಣ್ಣ ಗೂಡಂಗಡಿಯನ್ನು ಇಟ್ಟುಕೊಂಡಿರುವ ಎರಡು ಕಾಲುಗಳಿಲ್ಲದ ವಿಶೇಷ ಚೇತನ ವ್ಯಕ್ತಿ ಅಬ್ದುಲ್ ಸತ್ತಾರ್ ಮಾನವೀಯ ಕಾರ್ಯ ಮಾಡಿದವರು. ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ವಿಪರೀತ ರಕ್ತಸ್ರಾವದಿಂದ ಮಹಿಳೆಯೋರ್ವಳು  ಬಳಲುತ್ತಿದ್ದಳು. ಹಳಿಯಾಳ (Haliyal) ತಾಲೂಕಿನ ಸ್ವಾತಿ ಎಂಬ ಬಾಣಂತಿ ಮಹಿಳೆಗೆ ಬಿ ನೆಗೆಟಿವ್ ರಕ್ತ ಅವಶ್ಯಕತೆ ಇತ್ತು. ಮಂಗಳವಾರ ರಾತ್ರಿ 8:00 ಗಂಟೆ ಸುಮಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ತುರ್ತು ರಕ್ತದ ಅವಶ್ಯಕತೆ ಇರುವ ಬಗ್ಗೆ ರಕ್ತದಾನಿಗಳು ರಕ್ತ ನೀಡುವಂತೆ ಮನವಿಯನ್ನು ಮಾಡಲಾಗಿತ್ತು.

ಮನವಿ ಮಾಡಿ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಬಿ ನೆಗೆಟಿವ್ ರಕ್ತವನ್ನು ಹೊಂದಿರುವ ಅಬ್ದುಲ್ ಸತ್ತಾರ್ ಅವರು ತಕ್ಷಣವೇ ತನ್ನ ಮೂರು ಚಕ್ರದ ವಾಹನದ ಮೂಲಕ ಆಸ್ಪತ್ರೆಗೆ ಆಗಮಿಸಿದರು. ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಬಂದು ರಕ್ತವನ್ನು ನೀಡಿ, ನಿಜವಾದ ಮಾನವೀಯತೆಯನ್ನು ಮೆರೆದಿದ್ದಾರೆ. ತನ್ನ ಬದುಕೇ ದುಸ್ತರದಲ್ಲಿರುವ ಸಂದರ್ಭದಲ್ಲಿಯೂ, ಇನ್ನೊಂದು ಜೀವದ ಜೀವಕ್ಕೆ ಮಿಡಿದ ಅಬ್ದುಲ್ ಸತ್ತಾರ್ ಅವರ ಈ ಮಹತ್ಕಾರ್ಯ ನಿಜಕ್ಕೂ ಪ್ರಶಂಸನಿಯ.

ಇದನ್ನು ಓದಿ: ಬಂದರು ಇಲಾಖೆಯ ಸುರೇಶ ಶೆಟ್ಟಿ ಸೇವಾ ನಿವೃತ್ತಿ. ಆತ್ಮೀಯ ಬೀಳ್ಕೊಡುಗೆ.

ಅನಂತಮೂರ್ತಿ ಹೆಗಡೆ ನೇತೃತ್ವದ ಧರಣಿ. ಮತ್ತಿಘಟ್ಟಾ ರಸ್ತೆ ಸಮಸ್ಯೆ ಬಗೆಹರಿಸಿದ ಜಿಲ್ಲಾಡಳಿತ.

10 ಸಾವಿರ ರೂ ಚಾಲೆಂಜ್ ಗೆ 5 ಬಾಟಲಿ ಮದ್ಯ ಸೇವಿಸಿದ ವ್ಯಕ್ತಿ ಸಾವು.