ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola):  ಕೇಂದ್ರ ಸರ್ಕಾರ ಗ್ಯಾಸ್(Gas) ಮತ್ತು ತೈಲ (Puel) ಬೆಲೆ ಏರಿಕೆ ಖಂಡಿಸಿ ಅಂಕೋಲಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ (Protest) ನಡೆಸಿದ್ದಾರೆ.

ಅಂಕೋಲಾದ ಜೈ ಹಿಂದ್ ವೃತ್ತದಲ್ಲಿ  ಜಿಲ್ಲಾ ಕಾಂಗ್ರೆಸ್ (Congres) ಮತ್ತು ಮಹಿಳಾ ಕಾಂಗ್ರೇಸ್ ವತಿಯಿಂದ  ರಸ್ತೆ ಮೇಲೆ ಒಲೆ ಇಟ್ಟು ಚಹಾ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು  ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ ಸೌಮ್ಯ ರೆಡ್ಡಿ(soumya Reddi), ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೌಮ್ಯ ರೆಡ್ಡಿ, ಬಿಜೆಪಿ ಸರ್ಕಾರ ಅಚ್ಚೇದಿನ ಬಂದಿದೆಯಂತೆ 11 ವರ್ಷದಿಂದ ಹೇಳುತ್ತಿದೆ ಆದರೆ ಅಂಬಾನಿ, ಅದಾನಿಗೆ ಮಾತ್ರ ಅಚ್ಚೆ ದಿನ್ ಬಂದಿದೆ. ರಾತ್ರಿ ಬೆಳಗಾಗುವುದರೊಳಗೆ ಗ್ಯಾಸ್, ಪೆಟ್ರೋಲ್ ದರವನ್ನ ಕೇಂದ್ರ ಸರ್ಕಾರ ಏರಿಸಿದೆ. ಮಹಿಳಾ ವಿರೋಧಿ ಧೋರಣೆಯನ್ನ ಬಿಜೆಪಿ ಸರ್ಕಾರ ಅನುಸರಿಸಿದೆ ಎಂದರು. ಎರಡು ವರ್ಷದಿಂದ ಕಾಂಗ್ರೆಸ್ ಗೆ ಒಳ್ಳೆ ಹೆಸರು ಬರುತ್ತಿದೆ. ಹೀಗಾಗಿ ಅವರಿಗೆ ಅಸೂಯೆ ಉಂಟಾಗಿದೆ ಬಿಜೆಪಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ಕೇಂದ್ರ ಸರ್ಕಾರ ಗ್ಯಾಸ್, ಪೆಟ್ರೋಲ್ ದರ ಏರಿಸಿ ಬಡವರ ಹೊಟ್ಟೆ ಮೇಲೆ ತಣ್ಣೀರ ಪಟ್ಟಿ ಇಟ್ಟಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ರಾಜ್ಯಾಧ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಗಾಂವಕರ್, ಬೀನಾ ಮಾಂಕಾಳ್ ವೈದ್ಯ, ಜ್ಯೋತಿ ಪಾಟೀಲ್, ಪಾಂಡುರಂಗ ಗೌಡ, ವಿನೋದ್ ನಾಯ್ಕ, ರಾಜೇಶ್ ನಾಯ್ಕ ಸೇರಿ  ಜಿಲ್ಲೆಯ ಇತರ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನು ಓದಿ : ವ್ಯಕ್ತಿಯ ಪ್ಯಾಂಟ್ ಒಳಗೆ ಸೇರಿಕೊಂಡ ನಾಗರ ಹಾವು. ಮುಂದೇನಾಯ್ತು?

ಅನ್ಯ ಜಾತಿಯ ಹುಡುಗನೊಂದಿಗೆ ಓಡಿ ಹೋದ ಯುವತಿ. ತಂದೆ ಮಾಡಿದ್ದು ಅಪರಾಧ.

ಇನ್ಮುಂದೆ ಈ ಏರಿಯಾದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡುವಾಂಗಿಲ್ಲ.