ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi): ವ್ಯಕ್ತಿಯೊರ್ವ ಪ್ಯಾಂಟ್ ಧರಿಸುವ ವೇಳೆ ನಾಗರ ಹಾವೊಂದು (Snake) ಪ್ಯಾಂಟ್ನ ಒಳಗಡೆಯಿಂದ ಬುಸುಗುಟ್ಟಿದ ಘಟನೆ ನಡೆದಿದೆ.
ಶಿರಸಿಯ(Sirsi) ಗುರು ನಾರಾಯಣಗುರು ನಗರದಲ್ಲಿ ಈ ಘಟನೆ ನಡೆದಿದೆ. ಪ್ಯಾಂಟ್ ಹಾಕಿಕೊಳ್ಳಲು ಹೋದ ವ್ಯಕ್ತಿ ಪ್ಯಾಂಟ್ ಎಸೆದು ಪಾರಾಗಿದ್ದಾನೆ. ನಾರಾಯಣಗುರು ನಗರದ ಮಾಂತೇಶ ಎಂಬುವವರು ಮನೆಯಲ್ಲಿ ಇಟ್ಟ ತನ್ನ ಪ್ಯಾಂಟ್ನ್ನ ಧರಿಸಿ ನಗರಕ್ಕೆ ಹೋಗಲು ರೆಡಿಯಾಗುತ್ತಿದ್ದರು.
ಪ್ಯಾಂಟ್ (Pant) ತೆಗೆದು ಇನ್ನೇನೂ ಹಾಕಿಕೊಳ್ಳುವ ವೇಳೆ ಪ್ಯಾಂಟ್ನ ಒಳಗಡೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವೊಂದು ಬುಸುಗೆಟ್ಟಿದೆ. ಇದರಿಂದ ಒಮ್ಮೆ ಕೂಗಿಕೊಂಡು ಕೈಯಲ್ಲಿ ಪ್ಯಾಂಟ್ನನ್ನ ಬಿಸಾಡಿದ್ದಾರೆ.
ಬಳಿಕ ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಅವರನ್ನ ಕರೆಸಿ ಪ್ಯಾಂಟ್ ಒಳಗೆ ಇದ್ದ ಹಾವನ್ನು ಸೆರೆ ಹಿಡಿದು ಪುನಃ ಅರಣ್ಯಕ್ಕೆ ಬಿಡಲಾಗಿದೆ.
ಇದನ್ನು ಓದಿ : ಹೆಬ್ಬಾರ್ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ. ಯಲ್ಲಾಪುರದಲ್ಲಿ ಜನಾಕ್ರೋಶ ಯಾತ್ರೆ.
ಕಾರವಾರದ ಯೋಧ ಹೃದಯಘಾತದಿಂದ ನಿಧನ. ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು, ನಾಗರಿಕರು.