ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು (Bangaluru): ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ (Puc Exam) ಪ್ರಕಟವಾಗಿದೆ. ಒಟ್ಟಾರೆ 73.45 ಶೇಕಡಾ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು  ಪಾಸಾಗಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಈ ಬಾರಿ ಪರೀಕ್ಷೆಯಲ್ಲಿ ಪಾಸ್ ಆಗದ ವಿದ್ಯಾರ್ಥಿಗಳಿಗೆ ಒಂದು ಶುಭ ಸುದ್ದಿ(Good News) ನೀಡಿದ್ದಾರೆ.  ಫಲಿತಾಂಶದಲ್ಲಿ ಯಾರ್ ಯಾರು ಪರೀಕ್ಷೆ ಪಾಸ್ ಆಗಿದ್ದಾರೆ ಅಂತಹವರ ಲಿಸ್ಟ್ ಮಾತ್ರ ಹಾಕಿದ್ದೇವೆ. ಫೇಲ್ ಅಂತ ಈಗಲೇ ಹೇಳೋದಕ್ಕೆ ಬರೋದಿಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್ 24ರಿಂದ ಮೇ 8ರವರೆಗೆ ದ್ವಿತೀಯ ಪಿಯು ಪರೀಕ್ಷಾ -2 ನಡೆಯುತ್ತೆ. ಎರಡನೇ ಮತ್ತು ಮೂರನೇ ಎಕ್ಸಾಂ ಡೇಟ್ ಕೂಡ ಈಗಲೇ ಅನೌನ್ಸ್ ಮಾಡಿದ್ದೇವೆ. ಅನುತೀರ್ಣರಾದ ವಿದ್ಯಾರ್ಥಿಗಳು ಈಗಲೇ 2 ಹಾಗೂ 3ನೇ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಿ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯ 2ನೇ ಎಕ್ಸಾಂ ಮತ್ತು 3ನೇ ಎಕ್ಸಾಂ ಪರೀಕ್ಷಾ ಶುಲ್ಕ ಇರೋದಿಲ್ಲ. ಮಕ್ಕಳಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಬಾರಿ ಎಕ್ಸಾಂ ಶುಲ್ಕ ಇರುವುದಿಲ್ಲ ಎಂದು ತಿಳಿಸಿದ ಮಧು ಬಂಗಾರಪ್ಪ ಕಲ್ಯಾಣ ಕರ್ನಾಟಕ(Kalyana Karnataka) ಭಾಗದಲ್ಲಿ ಸಂಜೆ ಸ್ಪೆಶಲ್ ಕ್ಲಾಸ್ ಮಾಡಲು ಮಾಹಿತಿ ಕೊಟ್ಟಿದ್ದೇವೆ. ಶಿಕ್ಷಣ ಇಲಾಖೆಯ ಈ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಯಾರು ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿಲ್ಲ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ಫೇಲ್ ಆದವರು ಧೈರ್ಯದಿಂದ ಮತ್ತೆ ಪರೀಕ್ಷೆ ಬರೆದು  ಪಾಸಾಗಬಹುದಾಗಿದೆ.
ಇದನ್ನು ಓದಿ : ಅನುಕಂಪದ ಉದ್ಯೋಗದ ಆಸೆಗೆ ಗಂಡನ ಮುಗಿಸಿದ ಪತ್ನಿ ಅಂದರ್.

ಮನೆಯಲ್ಲಿ ಸಿಕ್ತು ಕಂತೆ ಕಂತೆ ನೋಟು. ಅದರ ಮೇಲೆ ರಿವರ್ಸ್ ಬ್ಯಾಂಕ್ ಆಪ್ ಇಂಡಿಯಾ ಬರಹ.

ಪಿಯುಸಿ ಫಲಿತಾಂಶ ಪ್ರಕಟ. ಬಾಲಕಿಯರ ಕಮಾಲ್.