ಕಾರವಾರ(KARWAR ) : ಅಯ್ಯಪ್ಪ ಮಾಲಾಧಾರಿಗಳ ಮೇಲೆ ನೌಪಡೆಯ ಸೈನಿಕರು ಹಲ್ಲೆ (Sellor assalt)
ನಡೆಸಿದ ಘಟನೆ ತಾಲೂಕಿನ ಜಡಿಗದ್ದೆ ಬಳಿ ನಡೆದಿದೆ.

ನೌಕಾ ಸೈನಿಕರ ದೌರ್ಜನ್ಯದ (Naval Sellor HARRASMENT)ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ರಾತ್ರಿ ಹೆದ್ದಾರಿ ತಡೆ ನಡೆಸಿದರು. ಭಾನುವಾರ ಸಂಜೆ ಮುದಗದ (Mudaga) ಗುರುಸ್ವಾಮಿ ಶ್ರೀನಿವಾಸ ಕೊಡಾರಕರ ಎಂಬುವವರ ಬೈಕ್ ಗೆ ನೌಕಾ ದಳದ ಸೆಲರ್ ಓರ್ವ ತನ್ನ ಬುಲೆಟ್(Bullet) ಗಾಡಿ ಅಪಘಾತಪಡಿಸಿದ್ದ. ಗಾಯಗೊಂಡ ಅವರನ್ನ ಕಾರವಾರದ ಖಾಸಗಿ ಆಸ್ಪತ್ರೆಗೆ(Karwar Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆಸ್ಪತ್ರೆಯಿಂದ  ಗುರುಸ್ವಾಮಿಗಳೊಂದಿಗೆ ಇತರ ಮಾಲಾಧಾರಿಗಳು ವಾಪಾಸ್ ಬರುತ್ತಿರುವಾಗ ಹತ್ತಾರು ನೇವಿ ಸೇಲರ್ ಗಳು ಸೇರಿ ವಾಹನವನ್ನ ತಡೆದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಕಾರವಾರದ ಆಮದಳ್ಳಿ(Amadallli), ಮುದಗಾ(Mudaga), ತೋಡೂರು(Toduru) ಭಾಗದ ನಾಗರಿಕರು ಸೇಲರ್ ಗಳ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ನಡೆ ನಡೆಸಿದ್ದರು. ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದರು.

ಇಂದು ಬೆಳಿಗ್ಗೆ ವಾಹನ ಡಿಕ್ಕಿ ವಿಚಾರವಾಗಿ ನೌ ಸೇನೆಯ ಸಿಬ್ಬಂದಿಗಳು ಇರುವ ಮುದಗದ  ವಸತಿಗೃಹ ಗೇಟ್ ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಗೇಟ್ ಮುಂದೆ ನೂರಾರು ಸಂಖ್ಯೆಯ ನಾಗರಿಕರು ಜಮಾಯಿಸಿದ್ದಾರೆ. ಸ್ಥಳದಲ್ಲಿ  ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅಯ್ಯಪ್ಪ ಮಾಲಾಧಾರಿಗಳು ಇಂದು ಮಧ್ಯಾಹ್ನ ಶಬರಿಮಲೆಗೆ(Shabarimale) ಹೋರಾಡಬೇಕಾಗಿದ್ದು, ಗುರುಸ್ವಾಮಿ ಅವರಿಗೆ ಅಪಘಾತದಲ್ಲಿ ಗಾಯವಾಗಿದೆ. ಆದರೂ ಉಳಿದ ವೃತಧಾರಿಗಳೊಂದಿಗೆ ಶಬರಿಮಲೆಗೆ ತೆರಳಲಿದ್ದಾರೆಂಬುದು ಗೊತ್ತಾಗಿದೆ.

ಇದನ್ನು ಓದಿ : ರಾಜಕೀಯ ಕಾರಣಕ್ಕೆ ಸುಳ್ಳೇ  ಟೀಕಿಸಿದರೆ ಐ ಡೋಂಟ್ ಕೇರ್: ಸಿ.ಎಂ ಖಡಕ್ ಮಾತು.

ಗ್ರಾಸಿಮ್ ಇಂಡಸ್ಟ್ರೀ ಸೋರಿಕೆ ಪ್ರಕರಣ. ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ.

ಧಾರ್ಮಿಕ ಕಾರ್ಯ ಮುಗಿಸಿ ತೆರಳುತ್ತಿದ್ದ ಕುಟುಂಬದ  ಕಾರು ಪಲ್ಟಿ : ದಂಪತಿ ದುರ್ಮರಣ.

ಡೊಂಕನಾಳ ಬಳಿ ಅಪಘಾತ. ಇಬ್ಬರ ಧಾರುಣ ಸಾವು

ಬಿಗ್ ಬಾಸ್ ವೀಕ್ಷಕರಿಗೆ ಶಾಕ್. ಫೈರ್‌ಬ್ರಾಂಡ್ ಚೈತ್ರಾ ಕುಂದಾಪುರ ಔಟ್.