ಗೋಕರ್ಣ(GOKARN) : ಕಡಲ ಅಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಇಂದು ಗೋಕರ್ಣದ ಮಧ್ಯೆಬೀಚಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕೋಲಾರ ಶ್ರೀನಿವಾಸಪುರ ಮೂಲದ ವಿನಯ ಎಸ್ ವಿ (22) ಮೃತ ವಿದ್ಯಾರ್ಥಿ. ಸೆಪ್ಟೆಂಬರ್ 11ರಂದು ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ(BANGLORE HILL SIDE PHARMACY COLLEGE)  ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಮುಖ್ಯ ಕಡಲತೀರದಲ್ಲಿ ಅಲೆಯ ಅಬ್ಬರ ಜಾಸ್ತಿ ಇರುವ ಕಾರಣಕ್ಕೆ ಈಜಲು ಅವಕಾಶ ನೀಡದಿದ್ದಾಗ ಪ್ರವಾಸಿಗರೆಲ್ಲ  ಮುಂದಿನ ಬೀಚ್ ಕಡೆ ಸಾಗಿದ್ದರು.

ದುಬ್ಬನಸಸಿ ಬಳಿ ಸಮುದ್ರದಲ್ಲಿ ಮೋಜುಮಸ್ತಿ ಮಾಡುವ ವೇಳೆ  ವಿನಯ್ ನೀರುಪಾಲಾಗಿದ್ದ. ಸ್ಥಳೀಯರು ಅಪಾಯಕ್ಕೆ ಸಿಲುಕಿದ್ದ ಇನ್ನೂ ಐವರನ್ನು ರಕ್ಷಿಸಿದ್ದರು . ಇಂದು ಬೆಳಿಗ್ಗೆ  ವಿನಯ್ ಶವ ಕರಿಯಪ್ಪನ ಕಟ್ಟೆ ಸಮೀಪದ ತೀರದಲ್ಲಿ ಪತ್ತೆಯಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನು ಓದಿ : ಎಟಿಎಂ ಗೆ ನುಗ್ಗಿದ ಕಳ್ಳ

HSRP ಮಾಡಿಸದಿದ್ದರೆ ಬರೆ ಗ್ಯಾರಂಟಿ

ರೈಲಿನಲ್ಲಿ ಬಂದರು. ಬಸ್ ನಲ್ಲಿ ಹೋದರು