ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) : ಪ್ರಯಾಗರಾಜ್ ಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭ ಮೇಳಕ್ಕೆ(Mahakumbha Mela) ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದಾರೆ. ಆದರೆ ಹೋಗಬೇಕೆಂದು ಹಂಬಲಿಸಿ ಹೋಗಲಾರದವರು ಅದೆಷ್ಟೋ ಮಂದಿ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಹಿಳೆ ಗೌರಿ(Women Gowri) ನಾಯ್ಕ ಕುಂಭಮೇಳವನ್ನ ನೆನಪಿಸುವ ಕಾರ್ಯ ಮಾಡಿದ್ದಾರೆ.
ಶಿರಸಿಯ ಗಣೇಶನಗರದ(Ganeshnagara) ಗೌರಿ ನಾಯ್ಕ ತಮ್ಮ ಮನೆಯ ಹಿಂಬದಿಯಲ್ಲಿ ಬಾವಿ ತೋಡಿ ಗಂಗೆಯನ್ನು ಉಕ್ಕಿಸಿದ್ದಾರೆ. ಏಕಾಂಗಿಯಾಗಿ ಬಾವಿ ತೋಡುವ ಅವರ ಸಾಹಸ ಬೆರಗುಗೊಳಿಸುವಂತದ್ದು. ಒಂದಲ್ಲ.. ಎರಡಲ್ಲ, ಇದು ನಾಲ್ಕನೇ ಬಾವಿ ಅವರ ಶ್ರಮದಿಂದ ತೆಗೆದಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಗೌರಿ ನಾಯ್ಕ(Gowri Naik) ಬಾವಿ ತೆಗೆಯಲು ಆರಂಭಿಸಿದ್ದರು. ಇದೀಗ ಬಾವಿಯಲ್ಲಿ ನೀರು ಉಕ್ಕಿದೆ. ಇವರ ತೋಡಿದ ಬಾವಿಯಲ್ಲಿ ಮಹಾಕುಂಭ ಮೇಳದ ನೆನಪು ಇದೆ. ಅವರು ತೋಡಿದ ಬಾವಿಯಲ್ಲಿ ಉಕ್ಕಿದ ಗಂಗೆಯಲ್ಲೇ ತ್ರಿವೇಣಿ ಸಂಗಮದ(Treeveni Sangama) ನೀರಂತೆ ಪುಣ್ಯ ಸ್ನಾನ ಮಾಡಿ ಸಮಾಧಾನ ಪಟ್ಟುಕೊಂಡಿದ್ದಾಳೆ.
ಕಟ್ಟಿದ ಬಾವಿಗೆ ‘ಮಹಾಕುಂಭ ಮೇಳ ಎಂದು ಬರೆಸಲು ನಿರ್ಧಾರಿಸಿದ್ದಾರೆ. ಎಲ್ಲರೂ ಮಹಾಕುಂಭ ಮೇಳಕ್ಕೆ ಹೋಗುತ್ತಿದ್ದಾರೆ. ಆದರೆ ನನ್ನನ್ನ ಕರೆದುಕೊಂಡು ಹೋಗಲು ಯಾರಿಂದಲೂ ಆಗುತ್ತಿಲ್ಲ. ಹೀಗಾಗಿ ನಾನು ಇಲ್ಲಿಯೇ ಗಂಗೆ ನೋಡಿದ್ದೇನೆ ಸಮಾಧಾನ ಆಗಿದೆ ಎಂದು ಗೌರಿ ನಾಯ್ಕ ಹೇಳಿದ್ದಾರೆ.
ಸುಮಾರು 56 ವರ್ಷದ ಗೌರಿ ನಾಯ್ಕ ಅವರು ಈಗ ತೋಡಿದ ಬಾವಿಯಲ್ಲಿ 30 ಅಡಿ ಆಳಕ್ಕೆ ಗಂಗೆ ಬಂದಿದೆ. ಏಳು ವರ್ಷ ಹಿಂದೆ ಮನೆ ಹಿಂಬದಿಯಲ್ಲಿ 65 ಅಡಿ ಆಳದ ಬಾವಿ ತೋಡಿದ್ದರು. ನಂತರ 45 ಅಡಿ ಆಳದ ಮತ್ತೊಂದು ಬಾವಿ ತೆಗೆದಿದ್ದರು. ಕಳೆದ ವರ್ಷ ಇಲ್ಲಿಯ ಗಣೇಶನಗರದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗಾಗಿ ಬಾವಿ ತೆಗೆದಿದ್ದರು. ಈಗ ಮಕ್ಕಳು ನೀರು ಕುಡಿಯುತ್ತಿದ್ದಾರೆ.
ಓರ್ವ ಮಹಿಳೆ ಏಕಾಂಗಿಯಾಗಿ ಬಾವಿ ತೆಗೆದು ನೀರು ಕಾಣುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು. ಅವರ ಶ್ರಮಕ್ಕೆ, ಸಾಹಸಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನು ಓದಿ : ಮಕ್ಕಳ ಮೇಲೆ ಎರಗಿದ ಶ್ವಾನ. ಮೂವರಿಗೆ ಗಾಯ.