ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ (Kumta): ತಾಲೂಕಿನ ದಿವಗಿ ಗ್ರಾಮದಲ್ಲಿ ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಅಘನಾಶಿನಿ ಆರತಿ ಅಭೂತಪೂರ್ವ ಕಾರ್ಯಕ್ರಮ ವಿಜ್ರಂಭಣೆಯಿಂದ ಭಕ್ತಿಪೂರ್ವಕವಾಗಿ ನೇರವೇರಿತು.
ದಿವಗಿ ಮಠದಲ್ಲಿ ಆಗಮಿಸಿದ ಅಥಿತಿಗಳು ಪೂಜೆ ನೆರವೇರಿಸಿದರು. ಬಳಿಕ ಪೂರ್ಣ ಕುಂಭದೊಂದಿಗೆ ಮಹಿಳೆಯರು ಮೆರವಣಿಗೆಯ ಮೂಲಕ ಸ್ವಾಗತ ಕೋರಿದರು.
ಅಘನಾಶಿನಿ ತಟದಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಗಳು ಹನುಮಾನ ಧ್ವಜರೋಹಣ ಕಾರ್ಯಕ್ರಮವನ್ನು ಭಾರತ ಮಾತೆಗೆ ತೈಲಾರ್ಪಣೆ ಮಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರೇಹಡಗಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಹಾಲ ಸ್ವಾಮೀಜಿ ಮಾತನಾಡಿ, ತಾಯಿಯಾದವಳು ಮಕ್ಕಳನ್ನು ಅತಿಹೆಚ್ಚು ಪ್ರೀತಿ ಮಾಡುತ್ತಾಳೆ. ಹಾಗೆಯೇ ಅಘನಾಶಿನಿ ನದಿ ಕೂಡಾ ಈ ಭಾಗದ ಜನರ ಜೀವ ನಾಡಿಯಾಗಿ ಅನೇಕರಿಗೆ ತಾಯಿಯಂತೇ ಪ್ರೀತಿಯಿಂದ ಸಲಹುತ್ತಿದ್ದಾಳೆ ಎಂದರು. ಅಲ್ಲದೆ ಯುವಾ ಬ್ರಿಗೇಡ್ ಕುಮಟಾದ ಈ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ ಭಾಗವಹಿಸಿದ ತಾಯಂದರಿಗೆ ಮಕ್ಕಳನ್ನು ಇಂತಹ ಸಂಘಟನೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಹೇಳಿದರು.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು ನದಿ ಪಾತ್ರದಲ್ಲೆ ಅನೇಕ ನಾಗರಿಕತೆ ಹಾಗೂ ವೇದಗಳ ಜನನ ಆಗಿದೆ. ಇಂತಹ ನದಿಗಳ ಉಳಿವಿಗಾಗಿ ಯುವಾ ಬ್ರಿಗೇಡ್ ಅನೇಕ ಸ್ವಚ್ಚತಾ ಕಾರ್ಯ ಮಾಡುತ್ತಾ ಬಂದಿದ್ದು ಮೂರುವರ್ಷಗಳಿಂದ ಕುಮಟಾ ಯುವಾ ಬ್ರಿಗೇಡ್ ತಂಡದವರು ಬೇರೆ ಬೇರೆ ಸ್ಥಳಗಳಲ್ಲಿ ಈ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಇಲ್ಲಿಯ ಜನರಲ್ಲಿ ನದಿಯ ಬಗ್ಗೆ ಅಭಿಮಾನ ಮೂಡುವಂತೆ ಮಾಡಿದ್ದಾರೆ. ಸ್ವಚ್ಛವಾಗಿರುವ ಅಘನಾಶಿನಿ ನದಿ ರಾಮ್ಸಾರ ಪಟ್ಟಿಗೆ ಸೇರಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ನಂತರ ಆಶೀರ್ವಚನ ನೀಡಿದ ಗುರುಗಳಾದ ಕರಿಂಜೆಮಠ ಮೂಡಬಿದರೆಯ ಶ್ರೀ ಮುಕ್ತಾನಂದ ಸ್ವಾಮಿಗಳು, ನಾವು ಧರ್ಮಕ್ಕಾಗಿ ಇಂದು ಜಾತಿ ಪಕ್ಷಗಳನ್ನು ಬಿಟ್ಟು ನಿಲ್ಲಬೇಕಾಗಿದೆ, ನಮ್ಮಲ್ಲಿ ಓಗ್ಗಟ್ಟು ಇಲ್ಲವಾದರೆ ಮುಂದೊಂದು ದಿನ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಅಲ್ಲದೆ ಯುವಾ ಬ್ರಿಗೇಡ್ ಕುಮಟಾ ಸಂಘಟನೆಯ 10 ವರ್ಷಗಳ ಕಾರ್ಯವನ್ನು ವಿಡಿಯೋ ಪ್ರದರ್ಶನದಲ್ಲಿ ವಿಕ್ಷಣೆಮಾಡಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು ಯುವಾ ಬ್ರಿಗೇಡ್ ಸಂಘಟನೆಯ ಶಕ್ತಿ ಜಾಸ್ತಿಯಾಗಲೆಂದು ಹಾಗೂ ದಿವಗಿ ಊರಿನ ಜನರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ದಿವಗಿ ಗ್ರಾಮಪಂಚಾಯತ ಅಧ್ಯಕ್ಷ ಜಗದೀಶ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕುಮಟಾ ಯುವಾ ಬ್ರಿಗೇಡ್ ಸದಸ್ಯರು ಮಾಡಿದ ಅಘನಾಶಿನಿ ಆರತಿ ಕಾರ್ಯಕ್ರಮ ಭಕ್ತಿ ಹೆಚ್ಚಿಸುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಸುಭಾಸ್ ಅಂಬಿಗ ಸ್ವಾಗತಿಸಿದರು. ಯುವಾ ಬ್ರಿಗೇಡ್ ತಂಡದ ಸದಸ್ಯ ಲಕ್ಷ್ಮೀಕಾಂತ ಮುಕ್ರಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು, ಊರಿನ ವಿಶೇಷತೆಯ ಬಗ್ಗೆ ಹೇಮಂತಕುಮಾರ ಗಾಂವಕರ ತಿಳಿಸಿದರು. ಯುವಾ ಬ್ರಿಗೇಡ್ ಕಾರ್ಯಕರ್ತ ಗೌರೀಶ ನಾಯ್ಕ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಸದಸ್ಯರಾದ ರವೀಶ ನಾಯ್ಕ, ಪ್ರಕಾಶ ನಾಯ್ಕ, ಸಚಿನ ಭಂಡಾರಿ, ಚಿದಾನಂದ ಹರಿಕಾಂತ, ಗಣಪತಿ ಪಟಗಾರ, ರಾಘವೇಂದ್ರ ಎಲ್ ಜಿ, ಗಿರೀಶ ಪಟಗಾರ, ಮಂಜುನಾಥ ಗೌಡ, ಜ್ಯೋತಿ ನಾಯ್ಕ, ಯಮುನಾ ಅಂಬಿಗ, ಊರಿನವರಾದ ರಾಘವೇಂದ್ರ ದೇಶಭಂಡಾರಿ, ಜಟ್ಟಿ ಮುಕ್ರಿ, ವಿನೋದ ಅಂಬಿಗ, ಆನಂದು ದೇಶಭಂಡಾರಿ, ವಿವೇಕ ನಾಯ್ಕ ಹಾಗೂ ಊರಿನ ಎಲ್ಲಾ ಸಮಾಜದ ನಾಗರಿಕರು ಉಪಸ್ಥಿತರಿದ್ದರು.
ಇದನ್ನು ಓದಿ : ಮಹಾಕುಂಭ ಮೇಳದ ನೆನಪಿಗೆ ಏಕಾಂಗಿಯಾಗಿ ಬಾವಿ ತೋಡಿದ ಮಹಿಳೆ.