ಗೋಕರ್ಣ(Gokarna): ಆರೋಗ್ಯದಲ್ಲಿ ಏರುಪೇರಾದ ವ್ಯಕ್ತಿಗೆ ಆಂಬುಲೆನ್ಸ್ (Ambulance)  ಸಿಗದೇ ಸಾವನ್ನಪ್ಪಿದ ಘಟನೆ ತದಡಿಯಲ್ಲಿ(Tadri) ನಡೆದಿದೆ. ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಲೋಹಿತ ಹಾವಪ್ಪ  ನಾಯ್ಕ(40) ಮೃತಪಟ್ಟ ದುರ್ದೈವಿ. ಭಾನುವಾರ ಲೋಹಿತ್ ಅವರ ಅರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ತುರ್ತು 108 ಗೆ ಕಾಲ್(Call) ಮಾಡಲಾಗಿತ್ತು.  ಕಾಲ್ ಸೆಂಟರ್(Cal Center) ಸಿಬ್ಬಂದಿ ಕರೆ ಸ್ವೀಕರಿಸಿದ್ದು ವಿಳಾಸ ಪಡೆದು, ಸ್ಥಳೀಯ ಸೇವೆಗೆ ಮಾಹಿತಿ ನೀಡಲು ಸಂಪರ್ಕಕಕ್ಕೆ  ಸಿಗುತ್ತಿಲ್ಲ ಎಂದು ಉತ್ತರಿಸಿದ್ದಾರೆ. ನಿಮಗೆ ತುರ್ತಾಗಿ ಬೇಕಿದ್ದರೆ  ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ಅದಾಗಿ ಕೆಲವೇ ಗಂಟೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ.

  ತುರ್ತು ಸೇವೆ ಲಭಿಸದೆ ಸಾವಿಗೆ ಕಾರಣವಾದ 108 ಆರೋಗ್ಯ(108 Health) ವ್ಯವಸ್ಥೆಯ  ವಿರುದ್ದ ಮೃತದೇಹವನ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟು ತದಡಿ ಗ್ರಾಮಸ್ಥರು(Tadri Villagers) ಪ್ರತಿಭಟಿಸಿದ್ದಾರೆ. ಬಡ ನಾಗರಿಕರಿಗೆ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಿ ವ್ಯವಸ್ಥೆಗೆ ನಾಗರಿಕರು ಅಸಮಧಾನಗೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಜಿಲ್ಲಾಡಳಿತ   ಆರೋಗ್ಯ ವ್ಯವಸ್ಥೆ ಸುಧಾರಿಸುವ ಕೆಲಸ ಮಾಡಬೇಕಿದೆ.

ಇದನ್ನು ಓದಿ : ಹೊನ್ನಾವರದಲ್ಲಿ ಗೋಗಳ್ಳರ ಅಟ್ಟಹಾಸ. ಸ್ಥಳೀಯರ ಆಕ್ರೋಶ

ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಮುಕ್ತ ಸ್ಪರ್ಧೆ.

ಕೊಟ್ಟ ಸಾಲ ವಾಪಾಸ್ ನೀಡಿಲ್ಲ ಎಂದು ಅಪ್ರಾಪ್ತೆಗೆ ಮದುವೆ.