ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಬೆಳ್ಳಂಬೆಳಗ್ಗೆ ದಾಂಡೇಲಿ ಪೊಲೀಸರು ನಗರ ಹಾಗೂ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಇರುವ ರೌಡಿಶೀಟರ್ ಗಳ ಮನೆಗೆ ಭೇಟಿ ನೀಡಿ ಬಿಸಿ ಮುಟ್ಟಿಸಿದ್ದಾರೆ.
ದಾಂಡೇಲಿ ನಗರ(Dandeli Town) ಹಾಗೂ ಗ್ರಾಮೀಣ ಭಾಗದಲ್ಲಿರುವ ರೌಡಿಶೀಟರ್ ಗಳ ಮನೆಗಳಿಗೆ ಭೇಟಿ ನೀಡಿದ ಪೊಲೀಸರು, ರೌಡಿಶೀಟರ್ ಗಳ ಮನೆಗಳನ್ನು ಜಾಲಾಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ, ಕಾನೂನನ್ನ ಕೈಗೆ ತೆಗೆದುಕೊಳ್ಳದಂತೆ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆಯ ಪಾಠ ಮಾಡಿದ್ದಾರೆ.
ದಾಂಡೇಲಿ ಡಿವೈಎಸ್ಪಿ (DYSP) ಶಿವಾನಂದ ಮದರಖಂಡಿಯವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್ಐ ಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್ ಹಾಗೂ ಗ್ರಾಮೀಣ ಭಾಗದ ಪಿಎಸ್ಐ ಗಳಾದ ಜಗದೀಶ ಮತ್ತು ಶಿವಾನಂದ ನಾವದಗಿ ಹಾಗೂ ಪೊಲೀಸರ ತಂಡದೊಂದಿಗೆ ರೌಡಿಶೀಟರ್ ಗಳ ಮನೆಗಳಿಗೆ ದಾಳಿ ಮಾಡಿ ಪರಿಶೀಲನೆಯನ್ನು ನಡೆಸಿದರು.
ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗಳಾದ ಮಂಜುನಾಥ ಆರ್.ಡಿ, ಅಂತೋನಿ ಆರ್.ಡಿ, ಫೈರೋಜ್ ಎ.ಎಸ್.ಡಿ, ಬಾಬು ಆರ್.ಡಿ, ಗಣೇಶ ಎ.ಕೆ ಹಾಗೂ ಗ್ರಾಮೀಣ ಭಾಗದ ರೌಡಿ ಶೀಟರ್ ಗಳಾದ ಮಂಜುನಾಥ ಪಿ.ಪಿ, ಗುರುನಾಥ.ಎಲ್ ಮತ್ತು ಕೃಷ್ಣ.ಎಸ್ ಇವರ ಮನೆಗಳಿಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿ, ಎಚ್ಚರಿಕೆಯನ್ನು ನೀಡಲಾಗಿದೆ.
ಮೂರು ದಿನದ ಈ ಜೀವನದಲ್ಲಿ ನೆಮ್ಮದಿ ಸಂತೃಪ್ತಿಯ ಜೀವನವನ್ನು ನಡೆಸಬೇಕೆಂದು ಬುದ್ದಿ ಮಾತು ಹೇಳಿದ್ದಾರೆ. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕುವುದಕ್ಕಿಂತ, ಇನ್ನೊಬ್ಬರ ಕಣ್ಣೀರನ್ನು ಒರೆಸಿ ಬದುಕುವ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಪೊಲೀಸರು ಕಿವಿ ಮಾತು ಹೇಳಿದ್ದಾರೆ.
ಇದನ್ನು ಓದಿ : ಹೀನ ಕೃತ್ಯದ ಹಿಂದಿರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಪ್ರಧಾನಿ ಮೋದಿ ಗುಡುಗು
ಜಮ್ಮು ಕಾಶ್ಮೀರದಲ್ಲಿ ಟೆರರ್ ಅಟ್ಯಾಕ್. 27 ಪ್ರವಾಸಿಗರ ಸಾವು.
ಮಾಜಾಳಿ ಬಳಿ ಪೈರಿಂಗ್. ಆರೋಪಿಗೆ ತಕ್ಕ ಉತ್ತರ ನೀಡಿದ ಪೊಲೀಸರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯ.