ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪ್ರಯಾಗರಾಜ್‌(Prayagraj) : ಕುಂಭಮೇಳದಲ್ಲಿ (Kumbhamela) ಸಿಕ್ಕಾಪಟ್ಟೆ ವೈರಲ್ ಆದ ಮಣಿ ಮಾರುವ ಹುಡುಗಿ ಮೊನಾಲಿಸಾ(Monalisa) ನಾಪತ್ತೆಯಾಗಿದ್ದಾಳೆ.

ಕಳೆದ ಮೂರು ದಿನಗಳಿಂದ  ಸೋಷಿಯಲ್‌ ಮೀಡಿಯಾದಲ್ಲಿ(Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಮೊನಾಲಿಸಾ ಪ್ರಯಾಗರಾಜ್ (Prayagraj) ಬಿಟ್ಟು ಊರು ಸೇರಿದ್ದಾಳಂತೆ.ಇನ್‌ಸ್ಟಾಗ್ರಾಂ(Instragram), ಫೇಸ್‌ಬುಕ್(Facebook), ಟ್ವಿಟ್ಟರ್(Twitter) ಸೇರಿದಂತೆ ಇತರ ಮೀಡಿಯಾಗಳಲ್ಲಿ ಈಕೆಯ ಫೋಟೋ ವೀಡಿಯೊಗಳು ಹರಿದಾಡುತ್ತಿದೆ.

ಪ್ರಸಿದ್ದ ನಟಿಯರಿಗೂ  ಸಿಗದ ಪ್ರಚಾರ  ಈಕೆಗೆ ಸಿಕ್ಕಿರೋದ್ರಿಂದ ಈಕೆಯ ಪಾಲಿಗೆ ಮುಳುವಾಗಿದೆ. ಮೊನಾಲಿಸಾಳನ್ನ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಅದರಲ್ಲೂ ಮೀಡಿಯಾದವರಂತು ಸಂದರ್ಶನ ನಡೆಸಲು ಮುಗಿ ಬೀಳ್ತಿದ್ದಾರೆ.  ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆದ ಸುಂದರಿ ಮೊನಾಲಿಸಾ ಈಗ ಇಡೀ ಭಾರತದ ಕ್ರಶ್ ಆಗಿದ್ದಾಳೆ.

ಮಹಾಕುಂಭ ಮೇಳದಲ್ಲಿ ಮಣಿ, ಸರ ಮಾರಾಟ ಮಾಡುತ್ತಿರುವ ಮೊನಾಲಿಸಾಳ(Monalisa) ಸ್ನಿಗ್ಧ ಮುಗ್ಧ ಸೌಂದರ್ಯ, ಕಣ್ಣಿಗೆ ಜನ ಮಾರುಹೋಗಿದ್ದಾರೆ. ನಿಷ್ಕಲ್ಮಶ ನಗು, ಆಕರ್ಷಣೆ ತುಂಬಿದ ಮುಖ, ಮಿಂಚಿನ ಮಾತು ಜನರನ್ನು ಮೋಡಿ ಮಾಡಿದೆ. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದಾಳೆ. ಕೆಲವರು ಈಕೆಯನ್ನು ಐಶ್ವರ್ಯಾ ರೈಗಿಂತಲೂ(Aishwarya Rai) ಮಿಕ್ಕಿದ ಸುಂದರಿ(Beauty) ಎಂದು ಹೋಲಿಸಿ ಹೊಗಳಿದ್ದಾರೆ. ಆದರೆ ಮೊನಾಲಿಸಾಳ ಸದ್ಯದ ಪರಿಸ್ಥಿತಿ ಮಾತ್ರ ದಯನೀಯವಾಗಿದೆ. ಎಲ್ಲಿಗೂ ಹೋಗುವಂತಿಲ್ಲ ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಜನರ ಕಾಟ ತಾಳಲಾಗುತ್ತಿಲ್ಲ. ಈಕೆಯನ್ನು ಜನ ಹುಡುಕಿ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರಂತೆ. ಇವಳಿಂದ ರುದ್ರಾಕ್ಷಿ(Rudrakshi) ಮಣಿಸರ ಖರೀದಿಸದೆ ಜೊತೆಗೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು, ವೀಡಿಯೊ ಮಾಡಲು, ಮಾತನಾಡಲು ಮುಗಿಬೀಳುತ್ತಿದ್ದಾರೆ.

ಮಧ್ಯಪ್ರದೇಶದ(Madhyapradesha) ಇಂದೋರ್(indore) ಮೂಲದ ಮೊನಾಲಿಸಾ ಭೋಸ್ಥೆ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ(Triveni Sangama) ಬಳಿ ಮಣಿ, ಸರ, ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಳು.  ರುದ್ರಾಕ್ಷಿ, ಮಣಿ, ಸರ ಮಾರುವುದು ಈಕೆಯ ಕುಟುಂಬದ ಕಸುಬು. ಎಲ್ಲೇ ಜಾತ್ರೆ, ಉತ್ಸವ ಇದ್ದರೂ ಹೋಗುತ್ತಾರೆ. ಮೈಸೂರಿನ ದಸರಾ(Mysore Dasara) ಹಬ್ಬಕ್ಕೂ ಆಗಮಿಸಿ ವ್ಯಾಪಾರ ಮಾಡಿದ್ದಾರೆ. ಆದರೆ ಅಲ್ಲೆಲ್ಲೂ ಸಿಗದ ಪ್ರಚಾರ ಮೊನಾಲಿಸಾಗಳಿಗೆ ಕುಂಭಮೇಳದಲ್ಲಿ ಸಿಕ್ಕಿದೆ. ಇದು ಮೊನಾಲಿಸಾ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಮುಳುವಾಗಿದೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಗುರುತು ಸಿಗದಂತೆ ಸಾಗಿದರೂ ಮೊನಾಲಿಸಾಳನ್ನು ಜನರು ಬಿಡುತ್ತಿಲ್ಲ. ಮೊನಾಲಿಸಾಳಿಗೆ ಸಂಕಷ್ಟ ಎದುರಾಗುತ್ತಿದ್ದಂತೆ ಪೋಷಕರು ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಆದರೆ ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ. ಮೊನಾಲಿಸಾಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಮೊನಾಲಿಸಾಳನ್ನ ಪೋಷಕರು ಆಕೆಯನ್ನು ಇಂದೋರ್‌ಗೆ ಕಳುಹಿಸಿಬಿಟ್ಟಿದ್ದಾರೆ.

ಇದನ್ನು ಓದಿ : ಆಪತ್ಕಾಲದಲ್ಲಿ ನೆರವಿಗೆ ಬಾರದ 108 ಆಂಬುಲೆನ್ಸ್, ವ್ಯಕ್ತಿ ಸಾವು. ಮೃತದೇಹವಿಟ್ಟು ಪ್ರತಿಭಟನೆ.

ಹೊನ್ನಾವರದಲ್ಲಿ ಗೋಗಳ್ಳರ ಅಟ್ಟಹಾಸ. ಸ್ಥಳೀಯರ ಆಕ್ರೋಶ

ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಮುಕ್ತ ಸ್ಪರ್ಧೆ.