ಕಾರವಾರ : ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷರು ಹಾಗೂ ಕಾರವಾರ ಚಿತ್ತಾಕುಲ ಗ್ರಾಮ‌ ಪಂಚಾಯತ್ ಅಧ್ಯಕ್ಷರು, ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷರು ಆಗಿರುವ ರಾಜು ಎಲ್ ತಾಂಡೇಲ್ ಅವರ ಆಕಸ್ಮಿಕ ನಿಧನ ಕಾರವಾರ ಜನತೆಗೆ ಶಾಕ್ ನೀಡಿದೆ.

ಇಂದು ಬೆಳಿಗ್ಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅವರ ಪಾರ್ಥಿವ ಶರೀರದ ಅಂತಿಮ ನಮನ ಮತ್ತು ಭಾವ ಪೂರ್ಣ ವಿದಾಯದ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕರಿಗೆ ರಾಜು ತಾಂಡೇಲ್ ರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಾರವಾರ ಸದಾಶಿವಗಡದ ಆಜಾದ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 9.30 ಗಂಟೆಗೆ ಕಾರವಾರ ಜಿಲ್ಲಾಸ್ಪತ್ರೆಯಿಂದ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಹೊರಟು ಕಾರವಾರ ನಗರದಿಂದ ಸಾಗಲಿದೆ. ಅಲ್ಲಿಂದ ಕಾರವಾರ ಸದಾಶಿಗಡದ ಆಜಾದ್ ಮೈದಾನಕ್ಕೆ ತೆರಳಲಿದೆ. ಆಜಾದ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ‌ ನಮನದ ನಂತರ ಮೆರವಣಿಗೆ ಮೂಲಕ ಚಿತ್ತಾಕುಲ ಸೀಬಡ್೯ ಕಾಲನಿಯ ರಾಜು ತಾಂಡೇಲ್ ರ ಸ್ವಗೃಹಕ್ಕೆ ತೆರಳಲಿದೆ ಎಂದು ಮೀನುಗಾರರ ಸಮಾಜದ ಪ್ರಮುಖರು ತಿಳಿಸಿದ್ದಾರೆ.

ಮೀನುಗಾರರ ಸಮಾಜದವರು, ಸಾರ್ವಜನಿಕರು ಅಂತಿಮ ನಮನದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.

ಇದನ್ನು ಓದಿ: ಮಹಾದಾನಿ ರಾಜು ತಾಂಡೇಲ ನಿಧನ.