ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಕೇಂದ್ರೀಯ ಕೈಗಾರಿಕೆ ಸುರಕ್ಷಾ ಪಡೆ (ಸಿಐಎಸ್ಎಫ್) ಸಂಸ್ಥಾಪನಾ ದಿನದ ಅಂಗವಾಗಿ, ದೇಶದ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಸಂಚರಿಸಲಿರುವ ಸೈಕ್ಲೋಥಾನ್-2025 (Cyclothan) ಸೋಮವಾರ ಸಂಜೆ ಕರ್ನಾಟಕ ಗಡಿ ಪ್ರವೇಶಿಸಿದೆ
ಕರ್ನಾಟಕ – ಗೋವಾ(Karnataka-Goa) ಗಡಿ ಭಾಗದ ಉತ್ತರ ಕನ್ನಡ (Uttarakannada) ಜಿಲ್ಲೆಯ ಮಾಜಾಳಿ ಚೆಕ್ಪೋಸ್ಟ್(Majali Checkpost) ಬಳಿ ಜಿಲ್ಲಾಡಳಿತ(District Administration) ಮತ್ತು ಪೊಲೀಸ್ ಇಲಾಖೆ(Police Department) ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಾಜಾಳಿ ಚೆಕ್ಪೋಸ್ಟ್ ಆಗಮಿಸಿದ ಸೈಕ್ಲೋಥಾನ್ (Cyclothan) ತಂಡದ ಸದಸ್ಯರನ್ನು ಪುಷ್ಪ ವೃಷ್ಠಿಯ ಮೂಲಕ ಹಾಗೂ ಜಿಲ್ಲೆಯ ಹೆಮ್ಮೆಯ ಜಾನಪದ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತದ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.
ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಸುಗ್ಗಿ ಕುಣಿತದ ಕಲಾವಿದರೊಂದಿಗೆ ಹೆಜ್ಜೆ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದರು.
ನಂತರ ಸೈಕಲ್ ರ್ಯಾಲಿಯನ್ನು ಮುಂದುವರೆಸಿದ ಸೈಕ್ಲೋಥಾನ್ ತಂಡದ ಸದಸ್ಯರು ಮಾಜಾಳಿ ಬೀಚ್ ನಿಂದ ದೇವಭಾಗ್ ಬೀಚ್ ಮೂಲಕ ಪೊಲೀಸ್ ಕಲ್ಯಾಣ ಮಂಟಪದವರೆಗೆ ಸಾಗಿದರು.
ಈ ಸಂದರ್ಭದಲ್ಲಿ ಹೆಚ್ವವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್, ಸಿಐಎಸ್ಎಫ್ ನ ಹಿರಿಯ ಕಮಾಂಡೆoಟ್ ಅಜಯ್ ಕುಮಾರ್ ಝಾ, ಡೆಪ್ಯುಟಿ ಕಮಾಂಡೆoಟ್ ಎಸ್.ಪಿ. ಪಾಟಕ್, ಸಹಾಯಕ ಕಮಾಂಡೆoಟ್ ದುರ್ಗೆಶ್, ಮನೋಜ್ ಕುಮಾರ್ ಮತ್ತಿತರರು ಇದ್ದರು.
ಈ ಸೈಕ್ಲೋಥಾನ್ ಕಾರ್ಯಕ್ರಮದಲ್ಲಿ ಸಿಐಎಸ್ಎಫ್(CISF) ಮಹಿಳಾ ಸಿಬ್ಬಂದಿ ಮತ್ತು ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ 110 ಸಿಬ್ಬಂದಿಯನ್ನು ಒಳಗೊಂಡ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದಾರೆ.
ಇದನ್ನು ಓದಿ : ಅಪಘಾತದಲ್ಲಿ ನಿವೃತ್ತ ಉಪನ್ಯಾಸಕರಿಬ್ಬರ ದುರ್ಮರಣ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ