ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕೋಲಾರ(Kolar): ವಾಯು ವಿಹಾರಕ್ಕೆಂದು ಹೋಗಿದ್ದ  ಇಬ್ಬರು  ಉಪನ್ಯಾಸಕರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಸಂಭವಿಸಿದೆ.

ಭಾನುವಾರ ಸಂಜೆ  ಈ ಘಟನೆ ನಡೆದಿದ್ದು, ನಿವೃತ್ತ ಕನ್ನಡ ಉಪನ್ಯಾಸಕ  ಕೆ.ಬಿ. ಮೋಹನ (64),  ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಮೃತ ದುರ್ದೈವಿಗಳು. ಇಬ್ಬರು ವಾಯುವಿಹಾರ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪರಿಚಿತ ಬೈಕ್  ಡಿಕ್ಕಿ ಹೊಡೆದಿದೆ.  ಪರಿಣಾಮವಾಗಿ ಗಂಭಿರವಾಗಿ ಗಾಯಗೊಂಡ ಇವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಪಘಾತ ನಡೆದ  ವೇಳೆ  ಬೈಕ್ ಸವಾರ  ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನು ಓದಿ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮೀನು ಕಚ್ಚಿದ ಪರಿಣಾಮ ಕೈ ಕಳೆದುಕೊಂಡ ವ್ಯಕ್ತಿ.

ಮಾದರಿಯಾದ ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ನಡೆದ  ಇಫ್ತಾರ್ ಸಂಗಮ

“ನೀರು ನೀಡಿ-ಜೀವ ಉಳಿಸಿ” ಅಭಿಯಾನ. ಬಹುಮಾನದ ಮೂಲಕ ಉತ್ತೇಜನ.