ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ(Accident) 24 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತರನ್ನು ಬಾಗಲಕೋಟೆ (Bagalakote) ಜಿಲ್ಲೆಯ ಇಳಕಲ್ ಮೂಲದ ಮಾಳಪ್ಪ ರಮೇಶ್ ಚಲವಾದಿ ಎಂದು ಗುರುತಿಸಲಾಗಿದೆ. ಕೆಲ ದಿನಗಳಿಂದ ಅವರು ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ಬಳಿ ವಾಸಿಸುತ್ತಿದ್ದರು.

ಲಾರಿ ಮತ್ತು ಬೈಕ್(Lorry-Bike) ಎರಡೂ ಹೊನ್ನಾವರದಿಂದ ಮಂಗಳೂರು (Honnavar to Manglore) ಕಡೆಗೆ ತೆರಳುತಿತ್ತು. ಮುರ್ಡೇಶ್ವರದ (Murdeshwar) ಪೆಟ್ರೋಲ್ ಪಂಪ್ ಬಳಿ ಲಾರಿ ಇದ್ದಕ್ಕಿದ್ದಂತೆ ವೇಗ ಕಡಿಮೆಯಾಯಿತು.  ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ..

ಮುರ್ಡೇಶ್ವರ ಪೊಲೀಸರು(Murdeshwar Police) ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ  ನಡೆಸಿದ್ದಾರೆ.

ಇದನ್ನು ಓದಿ : ಮೀನುಗಾರ ಮಹಿಳೆ ಸರ ಕದ್ದ ಚೋರರು. ಪೊಲೀಸರಿಂದ ಇಬ್ಬರ ಬಂಧನ

ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ರಾಘವೇಶ್ವರ ಶ್ರೀ ಕರೆ

ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು ದಾಳಿ. ಏಳು ಕಾರ್ಮಿಕರಿಗೆ ಗಾಯ.