ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital newsಜೋಯಿಡಾ(Joida) : ತಾಲೂಕಿನ ಗುಂದ ಗ್ರಾಮದ ಕಾಳಿ – ಕಾನೇರಿ(Kali-Kaneri) ನದಿಯ ಸಂಗಮದಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಗುಂದ ಗ್ರಾಮದ (Gunda Village) ನಿವಾಸಿ ಕೃಷ್ಣ ರಾಮಾ ಗಾಂವಕರ ಎಂಬುವರೇ ಮೃತಪಟ್ಟ ದುರ್ದೈವಿ. ಇವರು ಅರಣ್ಯ ಇಲಾಖೆಯಡಿ ಮರಗಳನ್ನು ಕಟಾವು ಮಾಡುವ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗುರುವಾರ ಮಧ್ಯಾಹ್ನ ತಾನು ತೆಗೆದುಕೊಂಡು ಬಂದಿದ್ದ ಮೀನಿನ ಬಲೆಯ ಜೊತೆ ಕಾಳಿ ಕಾನೇರಿ ನದಿಯ ಸಂಗಮಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗುಂದ ವಲಯಾರಣ್ಯಾಧಿಕಾರಿ ನೀಲಕಂಠ ದೇಸಾಯಿ ಹಾಗೂ ಅವರ ತಂಡ, ಜೋಯಿಡಾದ ಅಗ್ನಿಶಾಮಕ ದಳದ ತಂಡ, ಪಿಎಸ್ಐ ಮಹೇಶ್ ಮಾಡಿ ನೇತೃತ್ವದ ಪೊಲೀಸರ ತಂಡ ಸತತವಾಗಿ ನೀರಲ್ಲಿ ಮುಳುಗಿದ್ದ ಕೃಷ್ಣ ಗಾಂವಕರ ಅವರನ್ನು ಹುಡುಕುವ ಕಾರ್ಯಾಚರಣೆಯನ್ನು ಮಾಡಿತ್ತು. ಮಾನ್ಸ ಅಡ್ವೆಂಚರ್ ಆರ್ನ್ ಬಿಲ್ ಅಡ್ವೆಂಚರ್ ಜೋನ್ ಗೈಡ್ ಮ್ಯಾನ್ ಮಹಮ್ಮದ್ ಬಿ ಮಾಲ್ದಾರ್, ಚೈತನ್ ಆರ್ ಕುರುಗುಂದಮಟ್, ಮಂಜುನಾಥ್ ಎನ್ ವಡ್ಡರ್, ಪರಶುರಾಮ್, ದೀಪಕ್ ಸುರಿನೈಕ್. ಜಿ. ಇ ಉಮೇಶ್ ಅವರ ತಂಡ ಮೃತ ದೇಹ ಪತ್ತೆ ಮಾಡಿ ಹೊರ ತೆಗೆದಿದೆ. ಕಾರ್ಯಾಚರಣೆಗೆ ನಂದಿಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ದೇಸಾಯಿ ಹಾಗೂ ಸ್ಥಳೀಯರು ಸಹಕರಿಸಿದ್ದಾರೆ. ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ (Joida Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ. ಸವಾರ ದುರ್ಮರಣ.