ಹೊನ್ನಾವರ(Honnavar): ಕಲಾವಿದರು ಕಂಡಂತೆ, ಕಾಣುವ ಹಾಗೆ ಕೆಲವೊಂದು ಪಾತ್ರಗಳಿಗೆ ಇಂಥವರು ಇಂಥ ಪಾತ್ರಗಳಿಗೆ ಸೈ ಅಂದುಕೊಂಡಿರುತ್ತಾರೆ. ಸ್ಯಾಂಡಲ್ ವುಡ್ ನ(Sandalwood) ಹಿರಿಯ ನಟಿ ಉಮಾಶ್ರೀ(Senior Actor Umashri) ಯಕ್ಷ ದಿಗ್ಗಜರೊಬ್ಬರ ಆಸೆ ಈಡೇರಿಸಿದ್ದಾರೆ.
ಮೊದಲ ಬಾರಿಗೆ ಯಕ್ಷಗಾನ(Yakshagana) ವೇಷದಲ್ಲಿ ಮಿಂಚಿದ್ದಾರೆ. ಉತ್ತರಕನ್ನಡ(Uttarakannada) ಜಿಲ್ಲೆಯ ಹೊನ್ನಾವರದ (Honnavar) ಸೆಂಟ್ ಆಂಥೋನಿ ಮೈದಾನದಲ್ಲಿ ಪೆರ್ಡೂರು(Perdooru) ಅನಂತಪದ್ಮನಾಭ ಯಕ್ಷಗಾನ ಮಂಡಳಿಯು (Yakshagana) ಪ್ರದರ್ಶಿಸಿದ ‘ಶ್ರೀ ರಾಮ ಪಟ್ಟಾಭಿಷೇಕ’ (Shrirama Pattabhisheka) ಪ್ರಸಂಗದಲ್ಲಿ ‘ಮಂಥರೆ’ಯ(Manthare) ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಒಂದು ತಾಸುಗಳ ಕಾಲ ವೇದಿಕೆಯಲ್ಲಿ ಯಕ್ಷ ನೃತ್ಯ(Yaksha Dance) ಮಾಡಿದರು. ಯಕ್ಷನೃತ್ಯದೊಂದಿಗೆ ನಿರರ್ಗಳ ಅರ್ಥಗಾರಿಕೆಯ ಮೂಲಕ ಸಭಿಕರ ಕರತಾಡನ ಗಿಟ್ಟಿಸಿದರು. ನಟಿ ಉಮಾಶ್ರೀ ಅವರ ಮೊದಲ ಯಕ್ಷ ಪ್ರಸಂಗಕ್ಕೆ ಆರಂಭದಿಂದ ಅವರ ಪಾತ್ರ ಮುಗಿಯುವವರೆಗೆ ಸಿಳ್ಳೆ, ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸಿದರು.
ಕರಾವಳಿ(Karavali) ಭಾಗದ ಹಳ್ಳಿಹಳ್ಳಿಗಳಿಂದ ಯಕ್ಷಗಾನ(Yakshagana) ನೋಡಲು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟಿ ಉಮಾಶ್ರೀ, ಯಕ್ಷಗಾನದಲ್ಲಿ ಅಭಿನಯಿಸುವ ನಿರೀಕ್ಷೆ ಇರಲಿಲ್ಲ. ಯಕ್ಷಗಾನ ಪಟು ಸುಬ್ರಹ್ಮಣ್ಯ ಚಿಟ್ಟಾಣಿ(Chittani) ಅವರು ಹಲವು ದಿನದಿಂದ ಯಕ್ಷಗಾನ ಪಾತ್ರ ಮಾಡುವಂತೆ ಹೇಳುತ್ತಿದ್ದರು. ಅವರ ತಂದೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ (Chittani Ramachandra Hegade)ಅವರು ನನ್ನನ್ನು ಮಂಥರೆಯ ಪಾತ್ರದಲ್ಲಿ ನೋಡಲು ಬಯಸಿದ್ದರಂತೆ. ಹೀಗಾಗಿ ಹಿರಿಯ ಜೀವದ ಆಸೆ ಈಡೇರಿಸಿದ ಸಂತೃಪ್ತಿ ಸಿಕ್ಕಿದೆ’ ಎಂದು ಉಮಾಶ್ರೀ(Umashri) ಹೇಳಿದ್ದಾರೆ.
ಹಿರಿಯ ನಟಿ ಉಮಾಶ್ರೀ ಅವರು ಈಗಾಗಲೇ ನೂರಾರು ನಾಟಕಗಳು, ಸುಮಾರು ಐನೂರರಷ್ಟು ಸಿನೆಮಾಗಳಲ್ಲಿ(Cinema) ಅಭಿನಯಿಸಿದ್ದಾರೆ. ರಾಜಕಾರಣದಲ್ಲಿ ಸಚಿವರಾಗಿಯೂ(Minister) ಸೇವೆ ಸಲ್ಲಿಸಿದ್ದಾರೆ. ಅವರ ಚೊಚ್ಚಲ ಯಕ್ಷಗಾನ ಪ್ರದರ್ಶನದಿಂದಾಗಿ ಪ್ರೇಕ್ಷಕರು ಸಖತ್ ಖುಷಿಪಟ್ಟಿದ್ದಾರೆ.
ಇದನ್ನು ಓದಿ : ದಾಂಡೇಲಿಯಲ್ಲಿ ಆನೆ ನಡೆದಿದ್ದೆ ದಾರಿ.
ಬೈಂದೂರು ಪೊಲೀಸರಿಂದ ಎಸ್ಕೇಪ್. ಅಂಕೋಲಾ ಪೊಲೀಸರಿಗೆ ಲಾಕ್.
ಅಳಿಯಂದಿರಿಗೆ ಸಂಕ್ರಾಂತಿಗೆ ನೂರಾರು ಭಕ್ಷ್ಯಗಳು. ಈ ಮಾವ ಅತ್ತೆ ಎಲ್ಲರಿಗಿಂತ ಸೂಪರ್ ಕಣ್ರೀ.