ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿವಮೊಗ್ಗ(Shivamogga) : ನರ್ಸ್ ಹಾಗೂ ವೈದ್ಯೆಯ ನಡುವೆ ಉಂಟಾದ ಜಗಳ ವಿಕೋಪಕ್ಕೆ ಹೋಗಿ , ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ(Sucide Attempt) ಘಟನೆ ಭದ್ರಾವತಿ(Bhadravati) ಗ್ರಾಮಾಂತರ  ಆಸ್ಪತ್ರೆಯಲ್ಲಿ ಸಂಭವಿಸಿದೆ.

ವೈದ್ಯೆ ಡಾ. ಹಂಸವೇಣಿ ಹಾಗೂ ನರ್ಸ್ ಸುಕನ್ಯಾ ಆತ್ಮಹತ್ಯೆಗೆ  ಯತ್ನಿಸಿದವರು. ಐದು ವರ್ಷಗಳ ಹಿಂದೆ ನಿಯೋಜನೆ ಮೇರೆಗೆ ಭದ್ರಾವತಿಯ ಬಿಆರ್ ಪಿ ಆಸ್ಪತ್ರೆಯಲ್ಲಿ ಸುಕನ್ಯಾ ನರ್ಸ್ ಆಗಿ ಕೆಲಸಕ್ಕೆ ಆಗಮಿಸಿದ್ದರು. ಬಿಆರ್ ಪಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ(Primary Health Center) ಇವರು ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈದ್ಯಯಾಗಿರುವ ಡಾ. ಹಂಸವೇಣಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನರ್ಸ್ ಸುಕನ್ಯಾ ಭದ್ರಾವತಿ ಬಿಆರ್ ಪಿ ಆಸ್ಪತ್ರೆಯಲ್ಲಿ(Bhadravati BRP Hospital) ಆತ್ಮಹತ್ಯೆಗೆ ಯತ್ನಿದ್ದಾರೆ. ಅದಾದ ಒಂದು ಗಂಟೆ ಬಳಿಕ ಡಾ. ಹಂಸವೇಣಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಹಿಳಾ ವೈದ್ಯೆಯ ವಿರುದ್ಧ ಮಾನಸಿಕ ಕಿರುಕುಳ ಆರೋಪ ಹೊರಿಸಿ ಮಹಿಳಾ ನರ್ಸ್ ನಿಂದ ಆತ್ಮಹತ್ಯೆಗೆ ಮುಂದಾಗಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಡಾ. ಹಂಸವೇಣಿ ಅವರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ಅಸ್ವಸ್ಥಗೊಂಡ ಸುಕನ್ಯಾ ಅವರನ್ನ ತಕ್ಷಣವೇ ಶಿವಮೊಗ್ಗದ ಮೆಗ್ಗಾನ್(Shivamogga Meggan) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಕನ್ಯಾರನ್ನು ಭೇಟಿ ಮಾಡಿದ ಡಿಹೆಚ್ ಒ ಡಾ. ನಟರಾಜ್ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಸುಕನ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ಡಿಎಚ್ಒ ತಿಳಿಸಿದ್ದಾರೆ. ಘಟನೆಗೆ ವೈಯಕ್ತಿಕ ವಿಷಯ ಕಾರಣವಾಗಿದೆ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ವೈಯಕ್ತಿಕ ಘಟನೆ ಈ ಮಟ್ಟಕ್ಕೆ ಹೋಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ. ನಟರಾಜ್ (Dr Nataraj) ಹೇಳಿದ್ದಾರೆ.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ.

ಶೇಡಿ ಮರ ಏರಿ ಹರಕೆ ತೀರಿಸಿದ ಭಕ್ತರು. ಭಟ್ಕಳದಲ್ಲೊಂದು ವಿಶಿಷ್ಟ ಜಾತ್ರೆ.

ಸರ್ಕಾರಿ ನೌಕರರಿಗೆ ಶುಕ್ರದೆಸೆ. ಎಂಟನೇ ವೇತನ ಆಯೋಗ ರಚನೆಗೆ ಕೇಂದ್ರದ ಅಸ್ತು.

ಗುಂಡಿನ ದಾಳಿ. ಓರ್ವನ ಹತ್ಯೆಗೈದು 93ಲಕ್ಷ ರೂ. ಹಣದೊಂದಿಗೆ ಇಬ್ಬರು ಎಸ್ಕೇಪ್.

ನಟ ಸೈಪ್ ಅಲಿ ಖಾನ್ ಮೇಲೆ ಆಟ್ಯಾಕ್. ಕಳ್ಳತನಕ್ಕೆ ಬಂದವರ ಜೊತೆ ಹೋರಾಡಿದ ನಟ.