ಬೆಂಗಳೂರು (BANGLORE) : ಕಾರವಾರ ಶಾಸಕ ಸತೀಶ್ ಸೈಲ್ (Karwar MLA Satish Sail) ಅವರು ಆರು ಪ್ರತ್ಯೇಕ ಅಕ್ರಮ ರಫ್ತು (Export) ಪ್ರಕರಣಗಳಲ್ಲಿ ತನಗೆ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು    ಕರ್ನಾಟಕ (Karnataka) ಹೈಕೋರ್ಟ್ (High Court)ನಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ಕೇಂದ್ರೀಯ ತನಿಖಾ ದಳಕ್ಕೆ (CBI) ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ.

2009-10ರ ಅವಧಿಯಲ್ಲಿ ಅಂಕೋಲಾದ (Ankola) ತಾಲೂಕಿನ ಬೇಲೇಕೇರಿ (Belekeri) ಬಂದರಿನಿಂದ ಕಬ್ಬಿಣದ ಅದಿರನ್ನು (Iron ore) ವಶಪಡಿಸಿಕೊಂಡಿದ್ದು, ಈ ಪ್ರತಿಯೊಂದು ಪ್ರಕರಣದಲ್ಲಿ ಸೈಲ್ ಅವರಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಸತೀಶ ಸೈಲ್(Satish Sail) ಮತ್ತು ಇತರ ಕೆಲವು ಅಪರಾಧಿಗಳು, ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮತ್ತು ತಮ್ಮ ಮೇಲ್ಮನವಿಗಳ ಬಾಕಿಯಿರುವಾಗ ಜಾಮೀನಿನ ಮೇಲೆ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಹೀಗಾಗಿ ಸಿಬಿಐಗೆ (CBI) ನೋಟಿಸ್ (Notice) ಜಾರಿಮಾಡಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ  ಅವರು, ಶಿಕ್ಷೆಯ ಅಮಾನತು ಮತ್ತು ಜಾಮೀನು ಮಂಜೂರಾತಿಗೆ ಮಧ್ಯಂತರ ಆದೇಶ ಕೋರಿ ಸಲ್ಲಿಸಿರುವ ಮನವಿಯ ಮೇಲಿನ ವಾದವನ್ನು ಆಲಿಸಲು ವಿಚಾರಣೆಯನ್ನು ನವೆಂಬ‌ರ್ 13ಕ್ಕೆ ಮುಂದೂಡಿದರು.

ಮಾಜಿ ಮತ್ತು ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಶೇಷ ಸೆಷನ್ಸ್‌ ನ್ಯಾಯಾಲಯವು ಅಕ್ಟೋಬರ್ 24ರಂದು ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್‌ ಲಿಮಿಟೆಡ್‌ (SMSPL) ವ್ಯವಸ್ಥಾಪಕ ನಿರ್ದೇಶಕರಾಗಿರುವ, ಕಾರವಾರ ಶಾಸಕ ಸತೀಶ ಸೈಲ್ ಅವರನ್ನು ದೋಷಿ ಎಂದು ಘೋಷಿಸಿತ್ತು. ವಿಶೇಷ ನ್ಯಾಯಾಲಯವು ಅಕ್ಟೋಬರ್ 26ರಂದು  ಶಿಕ್ಷೆಯನ್ನು ಘೋಷಿಸಿದೆ. ಆರು ಪ್ರಕರಣಗಳಲ್ಲಿ ಪ್ರತಿ ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಆಗೀನ ಬಂದರು ಉಪ ಸಂರಕ್ಷಣಾಧಿಕಾರಿಯಾಗಿದ್ದ ಹಾಲಿ ನಿವೃತ್ತ ಮಹೇಶ ಬೀಲಿಯೇ, ಆಶಾಪುರ ಮಿನೆಚೆಮ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಚೇತನ್ ಶಾ, ಹೊಸಪೇಟೆಯ (Hospet) ಸ್ವಸ್ತಿಕ್ ಸ್ಟೀಲ್ಸ್‌ನ ನಿರ್ದೇಶಕ ಕೆ ವಿ ನಾಗರಾಜ ಅಲಿಯಾಸ್ ಸ್ವಸ್ತಿಕ್ ನಾಗರಾಜ ಮತ್ತು ಮಾಜಿ ನಿರ್ದೇಶಕ ಕೆ ವಿ ಏನ್  ಗೋವಿಂದರಾಜ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ನ ಪಾಲುದಾರ ಕೆ ಮಹೇಶಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ ಮತ್ತು ಲಾಲ್ ಮಹಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೇಮಚಂದ್ ಗಾರ್ಗ್ ಇತರೆ ಆರೋಪಿಗಳಾಗಿದ್ದಾರೆ.

ಇದನ್ನು ಓದಿ : ಕೈಗಾ ಉದ್ಯೋಗಿಗಳು ಪಾರು

ಸಮಾಧಿಯಿಂದ ಎದ್ದು ಬಂದ ಯೋಗ ಶಿಕ್ಷಕಿ

ಕಾರಿಗೆ ಆಕಸ್ಮಿಕ ಬೆಂಕಿ

ಹ್ಯಾಟ್ರಿಕ್ ಹೀರೊ ಶಿವಣ್ಣಗೆ ಅನಾರೋಗ್ಯ

ದಾಂಡೇಲಿಯಲ್ಲಿ ಮತ್ತೆ ಕಳ್ಳತನ