ಅಂಕೋಲಾ : ತಾಲೂಕಿನ ಶಿರಕುಳಿಯ ಸಭಾಭವನದಲ್ಲಿ ಜರುಗಿದ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಅಭಿವೃದ್ಧಿ ಸಂಘ (ರಿ)  ವಾರ್ಷಿಕ ಕಾರ್ಯಕಾರಿಣಿ  ಸಭೆಯಲ್ಲಿ ಬೆಳಂಬಾರದ ಹನಮಂತ ಬಿ ಗೌಡ  ಸತತ 10 ನೇ ಬಾರಿಗೆ ಸಂಘದ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

  2024-27 ತನಕ ಮುಂದಿನ 03 ವರ್ಷದ ಅವಧಿಗಾಗಿ ಆಯ್ಕೆ ಪ್ರಕ್ರೀಯೇ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಮಾಜಿ ಶಾಸಕರಾದ  ಕೆ ಎಚ್ ಗೌಡ ಸಭೆ ನಡೆಸಿಕೊಟ್ಟರು.

ಸಂಘದ ಉಪಾಧ್ಯಕ್ಷರಾಗಿ ಪ್ರಕಾಶ ಎಸ್ ಗೌಡ ಅಂಬಾರಕೊಡ್ಲ ಅಂಕೋಲಾ, ಪ್ರಧಾನ ಕಾರ್ಯದರ್ಶಿಯಾಗಿ  ಪುರುಷೋತ್ತಮ ಪಿ ಗೌಡ ಅಮದಳ್ಳಿ ಕಾರವಾರ, ಖಜಾಂಚಿಯಾಗಿ   ಪರಮೇಶ್ವರ ಗೌಡ ಕಡ್ಲೆ ಹೊನ್ನಾವರ, ಸಹಕಾರ್ಯದರ್ಶಿಯಾಗಿ  ವಿ ಟಿ ಗೌಡ ಬಾಸಗೋಡ ಅಂಕೋಲಾ ಆಯ್ಕೆಯಾದರು.

ಕಾರ್ಯಕಾರಿ ಸಮೀತಿ ಸದಸ್ಯರುಗಳಾಗಿ  ಎಸ್ ಟಿ ಗೌಡ ಅಘನಾಶಿನಿ ಕುಮಟಾ,  ಶಿವಾನಂದ ಎಸ್ ಗೌಡ ಲುಕ್ಕೇರಿ ಕುಮಟಾ,  ಶಂಕರ ವಿ ಗೌಡ ಹೆಗ್ರೆ ಅಂಕೋಲಾ,  ನಾಗರಾಜ ವಿ ಗೌಡ ಬಿಣಗಾ ಕಾರವಾರ,  ಸುರೇಶ ಆರ್ ಗೌಡ ಬಾಳೇರಾಸಿ ಕಾರವಾರ,  ಗಂಗಾಧರ ಕೆ ಗೌಡ ಸಾಣೇಮಕ್ಕಿ ಕಾರವಾರ,  ಬಲೀಂದ್ರ ಕೆ ಗೌಡ ಮೂಲೇಕೇರಿ ಕುಮಟಾ, ಸೋಮು ಎಮ್  ಗೌಡ ಹೊನ್ನಳ್ಳಿ ಅಂಕೋಲಾ,  ಲಕ್ಷ್ಮಣ ವಿ ಗೌಡ ಬೆಳಸೆ ಅಂಕೋಲಾ,   ವಿಷ್ಣು ಎಸ್ ಗೌಡ ಮೂಲೇಕೇರಿ ಕುಮಟಾ, ಶಂಕರ ವಿ ಗೌಡ ಬೆಳಸೆ ಅಂಕೋಲಾ, ಮನೋಹರ ಡಿ ಗೌಡ ಬಂಕಿಕೊಡ್ಲ ಕುಮಟಾ, ಮಂಕಾಳು ಆರ್ ಗೌಡ ಕೊಡ್ಸಣಿ ಅಂಕೋಲಾ, ಬಿ ಎಸ್ ಗೌಡ ಗೋಕರ್ಣ ಕುಮಟಾ,  ಮಂಗು ಬಿ ಗೌಡ ಅಂಬಾರಕೊಡ್ಲ ಅಂಕೋಲಾ, ಮಹಾದೇವ ಬಿ ಗೌಡ ತಾಳೆಬೈಲ ಅಂಕೋಲಾ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಮತ್ತು ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಸಮುದಾಯದ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಂಘದ ಕಾರ್ಯೋನ್ಮೋಖವಾಗಿದೆ. ಮುಂದಿನ ಮೂರು ವರ್ಷದವರೆಗೆ ಹೊಸ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪಿ ಗೌಡ ತಿಳಿಸಿದ್ದಾರೆ.