ಹಳಿಯಾಳ: ಪಟ್ಟಣದ ಶ್ರೀ ಪೇಟೆ ಬಸವೇಶ್ವರ  ರಥೋತ್ಸವ ಭಕ್ತರ ಹರ್ಷೋದ್ಘಾರದ ನಡುವೆ  ವಿಜೃಂಭಣೆಯಿಂದ ನಡೆಯಿತು. ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥವನ್ನ  ಮಾರುಕಟ್ಟೆ ರಸ್ತೆ ಮೂಲಕ  ಗೌರಿ ಗುಡಿ  ದೇವಸ್ಥಾನದವರೆಗೆ ಎಳೆಯಲಾಯಿತು.

ಪಟ್ಟಣದಲ್ಲಿ ರಥ ತೆರಳುವಾಗ ಭಕ್ತರು ಬಾಳೆಹಣ್ಣು, ಉತ್ತತ್ತಿ  ಎಸೆದು ಕೃತಾರ್ಥರಾದರು. ಜಾತ್ರೆಯಯಲ್ಲಿ ಡೊಳ್ಳು, ರಾಂಡೋಲು, ಭಜನೆ ಸೇರಿದಂತೆ  ಜನಪದ ವಾದ್ಯಗಳು ಜಾತ್ರೆಯ ಅಂದ ಹೆಚ್ಚಿಸಿತ್ತು.

ಈ ಬಾರಿಯೂ ಕೂಡ ಜಾತ್ರೆಗೆ ಧಾರವಾಡ, ದಾಂಡೇಲಿ, ಹುಬ್ಬಳ್ಳಿ  ಸೇರಿದಂತೆ ನಾಡಿನ ಬೇರೆಬೇರೆ ಭಾಗಗಳಿಂದ  ಭಕ್ತರು ಆಗಮಿಸಿದ್ದರು. ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶ್ರದ್ದೆ ಹಾಗೂ ಭಕ್ತಿಯಿಂದ ಜರುಗಿದವು. ಬೆಳಿಗ್ಗೆಯಿಂದಲೇ ಬಸವೇಶ್ವರ  ದರ್ಶನ ಪಡೆದು ಪುನೀತರಾದರು.