ಕಾರವಾರ :  ಇದು ಆರೋಗ್ಯ ಜಾಗೃತಿಯ ಹೆಸರಲ್ಲಿ ಸಂಸ್ಥೆಯೊಂದು ನಡೆಯುತ್ತಿರುವ ಸ್ಟೋರಿ ಇದು. ಸುಸಂಸ್ಕೃತ ಕುಟುಂಬದ ಮಹಿಳೆಯರನ್ನ ಲೈಂಗಿಕ ಕಾರ್ಯಕರ್ತರೆಂದು ಬಿಂಬಿಸಿ ಸರ್ಕಾರದ ಹಣ ಹೊಡೆಯುವ ವಿಷಯವನ್ನ ಸಂಸ್ಥೆಯ ಸಿಬ್ಬಂದಿಗಳೇ ಬಿಚ್ಚಿಟ್ಟಿದ್ದಾರೆ.

 ಶಿರಸಿಯ ಮಹಿಳಾ ಕ್ರಾಂತಿ ಫಿಮೇಲ್ ಸೆಕ್ಸ್ ವರ್ಕರ್ಸ್, ಟಾರ್ಗೆಟ್ ಇಂಟರವೆನಶನ್ ಸಂಸ್ಥೆಯಿಂದ ಅಮಾಯಕ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರಂತೆ. 2008 ರಲ್ಲಿ ಆರಂಭವಾದ ಈ ಸಂಸ್ಥೆ ಶಿರಸಿ, ಮುಂಡಗೋಡು, ಯಲ್ಲಾಪುರ, ದಾಂಡೇಲಿ ಜೋಯಿಡಾ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಲೈಂಗಿಕ ಕಾರ್ಯಕರ್ತರಿಗಾಗಿ ಇರುವ ಸಂಸ್ಥೆಯ ಮುಖ್ಯಸ್ಥರು ಸುಸಂಸ್ಕೃತ ಮಹಿಳೆಯರಿಗೆ ಆಧಾರ ಕಾರ್ಡ್ ಮಾಡಿಸಿಕೊಡುತ್ತೇವೆಂದು ಹೇಳಿ ಅವರ ಸಹಿ ಪಡೆದು ಅದಕ್ಕೆ ಫಿಮೇಲ್ ಸೆಕ್ಸ್ ವರ್ಕರ್ಸ್ ದೃಢಿಕರಣ ಪತ್ರದ ಮೇಲೆ ಪೋರ್ಜರಿ ಸಹಿ ಪಡೆಯುವುದನ್ನ ಮಾಡುತ್ತಿದ್ದಾರೆಂದು ಸಂಸ್ಥೆಯಲ್ಲಿ ಕೆಲಸ ಮಾಡಿದ ನೌಕರರೇ ಆರೋಪಿಸಿದ್ದಾರೆ. 

ಸಂಸ್ಥೆಯು ತನ್ನ ಉದ್ದೇಶ ಮರೆತು ಆರೋಗ್ಯ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಾಗಿ ಸೇರದಿದ್ದಲ್ಲಿ ಅವರಿಗೆ ಅರಿಶಿಣ ಕುಂಕುಮ ಕಾರ್ಯಕ್ರಮವಿದೆ. ಉಚಿತ ಆರೋಗ್ಯ ತಪಾಸಣೆ ಇದೆ ಎಂದು   ಮಹಿಳೆಯರನ್ನ ಕರೆಯಲಾಗುತ್ತಿದ್ದಂತೆ.  ಬಂದವರಿಗೆ ಸರಿಯಾದ ಮಾಹಿತಿ ನೀಡದೇ ಅವರ ರಕ್ತದ ಮಾದರಿ ಸಂಗ್ರಹಿಸುತ್ತಾರೆ. ಬಳಿಕ ಒಬ್ಬ ವ್ಯಕ್ತಿಯದ್ದೆ ಬ್ಲಡ್ ನ್ನ ಏಳೆಂಟು ಕಿಟ್ ಗೆ ಹಾಕಿ ಹೆಚ್ಚಿನ ಮಾದರಿ ತೋರಿಸಿ ತಮ್ಮ ಟಾರ್ಗೆಟ್ ಮುಗಿಸುತ್ತಾರಂತೆ.  ಹೀಗಾಗಿ ಈ ಸಂಸ್ಥೆಯಿಂದ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿಗಳೆ ಆರೋಪಿಸಿದ್ದಾರೆ.

ಸಂಸ್ಥೆಯಲ್ಲಿ ಆಗುತ್ತಿರುವ ಅನಾಚಾರ ತಡೆಯಲಾಗದೆ  ಹೊರ ಬಂದಿದ್ದೇವೆ.  ಅಲ್ಲದೇ ನಮಗೆ ನೀಡಬೇಕಾಗಿರುವ ಸಂಬಳವನ್ನ  ನೀಡದೇ ವಂಚಿಸಿದ್ದಾರೆ. ಒಳಗಿನ ವಿಷಯಗಳನ್ನೆ ಹೊರಗಡೆ ವಿಷಯ ತಿಳಿಸಿದರೆ ನಿಮ್ಮನ್ನೆ ಸೆಕ್ಸುಲ್ ವರ್ಕರ್ ಎಂದು ಎಲ್ಲರಿಗೂ ತಿಳಿಸ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರಂತೆ. ಇಂಥ ಸಮಾಜ ಘಾತುಕ ಸಂಸ್ಥೆ ಜಿಲ್ಲೆಗೆ ಬೇಡ ಎಂದು ಸಿಬ್ಬಂದಿಗಳು ಹೇಳಿದ್ದಾರೆ. 

ಸಂಸ್ಥೆಯಲ್ಲಿ ಆಗುತ್ತಿರುವ ವಿಷಯಗಳ ಬಗ್ಗೆ ಸಿಬ್ಬಂದಿಗಳು  ಡಬ್ಲು ಎಚ್ ಆರ್ ಕೆ ಫೌಂಡೇಶನ್ ಗೆ ತಿಳಿಸಿದ್ದಾರೆ. ಹೀಗಾಗಿ ಪೌಂಡೇಶನ್ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆರೋಗ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದ್ರೆ ಈವರೆಗೂ ಯಾವ ಕ್ರಮವೂ ಆಗಿಲ್ಲ. ಸರ್ಕಾರದ ಅನುದಾನವನ್ನ ಸಂಸ್ಥೆ ಹೊಡೆಯುತ್ತಿದೆ. ಹೀಗಾಗಿ ಮಹಿಳಾ ಕ್ರಾಂತಿ ಸಂಸ್ಥೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಡಬ್ಲುಎಚ್ ಆರ್ ಕೆ ಫೌಂಡೇಶನ್ ಜಿಲ್ಲಾಧ್ಯಕ್ಷೆ.  ಅರ್ಚನಾ ಜಯಪ್ರಕಾಶ ನಾಯಕ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಅಮಾಯಕ ಮಹಿಳೆಯರ ಹೆಸರನ್ನ ಸಂಸ್ಥೆಯ ದಾಖಲೆಯಲ್ಲಿ ನಮೂದು ಮಾಡಿರುವ ಶಂಕೆ ಇದೆ. ಹೀಗಾಗಿ ಸಂಬಂಧಪಟ್ಟವರು ತನಿಖೆ ನಡೆಸಬೇಕೆಂದು ಕೆಲಸ ಮಾಡಿದ ಸಿಬ್ಬಂದಿಗಳು ಆಗ್ರಹಿಸಿದ್ದಾರೆ. ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ತಪ್ಪಿಸಿ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಡಬ್ಲೂ ಎಚ್ ಆರ್, ಆರ್ ಕೆ ಫೌಂಡೆಷನ್  ವಿಶ್ವ ಮಾನವ ಹಕ್ಕು ಸಂಸ್ಥೆಯ ಕಾನೂನು ಸಲಹೆಗಾರ್ತಿ ಅರ್ಚನಾ ಜೆ ನಾಯಕ,  ಜಯಪ್ರಕಾಶ ಮಹಾಬಲೇಶ್ವರ ನಾಯಕ, ಮಂಜುನಾಥ ನಾಯ್ಕ, ಶ್ರೀಧರ ವಿ ನಾಯ್ಕ, ಶ್ರೀನಿವಾಸ ಮಾಸ್ತಪ್ಪ ನಾಯ್ಕ, ಎನ್ ಎಂ ನಾಯ್ಕ, ಮಾಲಿನಿ‌ ನಾಯ್ಕ, ಮಹಿಳಾ‌ ಕ್ರಾಂತಿ‌ ಸಂಸ್ಥೆಯ ಸಿಬ್ಬಂದಿ  ಸೌಮ್ಯ ರಾವ್, ತೆರೆಸಾ ಅಂಥೋನಿ ಡಿಸೋಜಾ, ಮೀನಾಕ್ಷಿ , ಫಾತಿಮಾ‌ ಸಿದ್ದಿ, ತುಕಾರಾಮ, ಗುಲ್ಸಾರ್ ಬಾನು, ರೋಜಿ ಫರ್ನಾಡೀಸ್ ಹಾಜರಿದ್ದರು.