ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ಸಿನಿಮಿಯ ರೀತಿಯಲ್ಲಿ ಮೀನುಗಾರನೊರ್ವ ಆಳ ಸಮುದ್ರದಲ್ಲಿ ಈಜಿ ದಡ ಸೇರಿದ ಘಟನೆ ಕಾರವಾರದಲ್ಲಿ ನಡೆದಿದೆ.

ಮಾಜಾಳಿಯ ಮಹೇಶ್ ವಿಠ್ಠಲ್ ಸಾಳಗಾಂವಕರ್(45) ಸಾಹಸ ಮಾಡಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡವರು. ಮಹೇಶ್  ಸೋಮವಾರ ಸಂಜೆ ಎಂದಿನಂತೆ ಮೀನು ಹಿಡಿಯಲು  ತಮ್ಮ ಪಾತಿ ದೋಣಿಯಲ್ಲಿ  ತೆರಳಿದ್ದರು. ಇವರು ಮೀನು ಹಿಡಿಯುವ ಸ್ಥಳದಲ್ಲಿ  ಮಂಗಳೂರಿನ ಯಾಂತ್ರಿಕ ದೋಣಿಯೊಂದು(Mangaluru Boat) ಮೀನಿಗಾಗಿ ಬಲೆ ಹಾಕಿದೆ. ಆಗ ಇವರಿದ್ದ ಚಿಕ್ಕ ಪಾತಿ ದೋಣಿ ಅವರ ಬಲೆಗೆ ಸಿಲುಕಿದೆ. ಆಗ ಮಂಗಳೂರು ಬೋಟ್ ಮೀನುಗಾರರು  ಮಹೇಶ ಅವರಿಗೆ ಭಯ ಪಡಿಸಿದ್ದಾರೆ. ತಕ್ಷಣ ತಮ್ಮ ಪತ್ನಿಗೆ ಕಾಲ್ ಮಾಡಿ   ತಾನು ಅಪಾಯದಲ್ಲಿದ್ದೇನೆಂದು ತಿಳಿಸಿದ್ದಾರೆ. ನಂತರ ಅವರ ಮೊಬೈಲ್ ಸ್ವಿಚ್ ಆಪ್ ಆಗಿದೆ.

ನಂತರ ಊರವರು ಎಷ್ಟೇ ಪ್ರಯತ್ನಿಸಿದರು ಸಂಪರ್ಕ ಸಿಗಲಿಲ್ಲ. ಸ್ಥಳೀಯರು ಹಾಗೂ ಚಿತ್ತಾಕುಲ ಪೊಲೀಸರು(Chittakula Police) ರಾತ್ರಿ ಸುಮಾರು ತಾಸುಗಳ ಕಾಲ ಮಹೇಶ್ ಗಾಗಿ ಹುಡುಕಾಟ ನಡೆಸಿದ್ದರು. ಸಿಗದಿದ್ದಾಗ ಮಹೇಶ್ ಗೆ ಆತಂಕ ಪಡಿಸಿದೆ ಏನ್ನಲಾದ ಮಂಗಳೂರಿನ ಬೋಟ್ ಎಳೆದು ತಂದಿದ್ದಾರೆ.

ಸೋಮವಾರ ರಾತ್ರಿ ಮಹೇಶ್ ತಮ್ಮ ಜೀವ ರಕ್ಷಿಸಿಕೊಳ್ಳಲು ತಮ್ಮ ಪಾತಿ ದೋಣಿಯಿಂದ ಸಮುದ್ರಕ್ಕೆ ಜಿಗಿದು ಬಳಿಕ ತಮಲ್ಲಿರುವ ಚಾಕುವಿನಿಂದ ದೋಣಿ ನಿಯಂತ್ರಿಸುವ ಉಲಾಂಡಿ ದಾರ ತುಂಡರಿಸಿ ಮರದ ಹಲಗೆಯೊಂದನ್ನ ಹಿಡಿದು ಈಜಿದ್ದಾರೆ. ಸುಮಾರು ಎಂಟುವರೆ ತಾಸುಗಳ ಕಾಲ ಈಜಿ ಮಂಗಳವಾರ  ಬೆಳಗಿನ ಜಾವ 5-30ರ ಸುಮಾರಿಗೆ ಗೋವಾದ ಕಾಣಕೋಣ ಕಡಲತೀರ (Goa Kanakon Beach) ಸೇರಿದ್ದಾರೆ.

ಗ್ರಾಮದ ನಾಗರಿಕರು ಸ್ಥಳಕ್ಕೆ ಧಾವಿಸಿ ಅವರನ್ನ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥರಾದ ಮಹೇಶ್ ಚೇತರಿಸಿಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ  ಯಾಂತ್ರಿಕ ಬೋಟ್ ಮೀನುಗಾರರು ಸೀಮೆ ಉಲ್ಲಂಘಿಸಿ   ಸಾಂಪ್ರದಾಯಿಕ ಮೀನುಗಾರರು ನಡೆಸುವ ಪ್ರದೇಶಕ್ಕೆ  ಬಂದು ಮೀನು ಹಿಡಿಯುತ್ತಿರುವ ಆರೋಪವಿದೆ. ಅಂತೂ ಘಟನೆಯೊಂದರಲ್ಲಿ ಮೀನುಗಾರ ಸಾವು ಬದುಕಿನ ನಡುವೆ ಹೋರಾಡಿ ತಮ್ಮ  ಪ್ರಾಣ ಉಳಿಸಿಕೊಂಡಿದ್ದಾರೆ.


ಇದನ್ನು ಓದಿ : ದೇಹದಲ್ಲಿ ಚಿನ್ನ ಸಾಗಾಟ. ವಿಮಾನ ನಿಲ್ದಾಣದಲ್ಲಿ ನಟಿ ಆರೆಸ್ಟ್.

ಕ್ಯಾಂಪ್ ನಲ್ಲಿದ್ದ ವಿದ್ಯಾರ್ಥಿನಿ ಆಕಸ್ಮಿಕವಾಗಿ ಸಾವು.

ಬಂದರು ಯೋಜನೆ ಮೀನುಗಾರರ ಹೊಟ್ಟೆ ಬರಿದಾಗಿಸುವ ಪ್ರಯತ್ನ: ದಿಲೀಪ್ ಅರ್ಗೇಕರ್