ಶಿರಸಿ:  ಕಾಡು ಹಂದಿ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನವಾಸಿ ಅರಣ್ಯ ವಲಯದ ಸಿಬ್ಬಂದಿಗಳು ಮತ್ತೊಂದು ಕಾರ್ಯಾಚರಣೆ ಮಾಡಿದ್ದಾರೆ. ತಪ್ಪಿಸಿಕೊಂಡಿದ್ದ ಇನ್ನಿಬ್ಬರು ಅರೋಪಿಗಳನ್ನ ಬಂಧಿಸಿದ್ದಾರೆ.

ಸೊರಬ ತಾಲೂಕಿನ ದ್ಯಾಮಣ್ಣ ರಮೇಶ ಹಾಗು ಶಿರಸಿ ತಾಲೂಕಿನ ಹೆಬ್ಬತ್ತಿಯ ಶ್ರೀಕಾಂತ ನಾಯ್ಕ ಬಂಧಿತರು. ಜೂನ್ ಹದಿನಾರರಂದು ದಾಸನಕೊಪ್ಪದ ಅಂಡಗಿ ವಲಯದಲ್ಲಿ ಕಾಡು ಪ್ರಾಣಿ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದರು. ಈ ವೇಳೆ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿದ್ದರು. ಇವರಿಬ್ಬರೂ ಆರೋಪಿಗಳು ಪರಾರಿಯಾಗಿದ್ದರು.

ದ್ಯಾಮಣ್ಣ ರಮೇಶ ಆಮೆಗಳನ್ನು ಮಾಂಸಕ್ಕಾಗಿ ಬೇಟೆಯಾಡಿರುವುದು ಸಾಬೀತಾಗಿದೆ. ಅವರ ಮನೆಯ ಹಿಂಬದಿಯಲ್ಲಿ ಜೀವಂತ ಆಮೆಗಳು ಪತ್ತೆಯಾಗಿದೆ.

  ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ರವರ ನಿರ್ದೇಶನದ ಮೇರೆಗೆ ಸಹಾಯಕ ಅರಣ್ಯಾಧಿಕಾರಿ ಹರೀಶ ಸಿ ಎನ್ ಮಾರ್ಗದರ್ಶನ ಹಾಗು ವಲಯ ಅರಣ್ಯಾಧಿಕಾರಿ ರಂಗನಾಥ ಜಿ ಹೆಚ್ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಾರ್ತಿಕ ನಾರ್ವೇಕರ್ ಸೇರಿದಂತೆ ದಯಾನಂದ ಬೋರ್ಕರ್, ನನ್ನೆ ಸಾಬ್ ಸಂಗೂರ್, ಅಲ್ಲಾಭಕ್ಷ ಇತರರು ಪಾಲ್ಗೊಂಡಿದ್ದರು.