ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) :  ದಾರಿ ವಿಷಯದಲ್ಲಿ ಗಲಾಟೆ ಮಾಡಿ ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾದ ಇಬ್ಬರಿಗೆ ನ್ಯಾಯಾಲಯ ಶಿಕ್ಷೆ(Court Punishment) ಪ್ರಕಟಿಸಿದೆ.

ಯಲ್ಲಾಪುರ(Yallapur) ತಾಲೂಕಿನ ಕಿರವತ್ತಿ (Kirawatti) ಜಯಂತಿನಗರದ ಹಸೀನಾ ಶೇಖ್ ಹಾಗೂ ಅವರ ಸಂಬಂಧಿಕರಾದ ಜಾಫರ್ ಪಟೇಲ್, ಇಮಾಮ್ ಪಟೇಲ್, ಆಶಾಬಿ ಪಟೇಲ್ ಹಾಗೂ ನಗ್ಮಾ  ಪಟೇಲ್ ನಡುವೆ ವೈಮನಸ್ಸು ಉಂಟಾಗಿತ್ತು. ಜಾಗದ ವಿಷಯವಾಗಿ ಅವರ ನಡುವೆ ಜಗಳವಾಗಿತ್ತು.


2021ರ ಎಪ್ರಿಲ್ 13ರಂದು ಹಸೀನಾ ಶೇಖ್ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಲ್ಲಿನ ದಾರಿಯಲ್ಲಿ ಜನರು ತಿರುಗಾಡುತ್ತಿದ್ದರು. ಇದನ್ನು ನಗ್ಮಾ ಪಟೇಲ್ ವಿರೋಧಿಸಿದ್ದರು. ಆಗ, ಹಸೀನಾ ಶೇಖ್ `ಜನರ ತಿರುಗಾಡಲಿ ಬಿಡು’ ಎಂದು ಬುದ್ದಿವಾದ ಹೇಳಿದ್ದರು. ಇದರಿಂದ ಸಿಟ್ಟಾದ ನಗ್ಮಾ ಪಟೇಲ್ `ಈ ಜಾಗ ನಮ್ಮದು. ಇಲ್ಲಿ ಯಾರು ತಿರುಗಾಡಬೇಡಿ’ ಎಂದು ಎಚ್ಚರಿಸಿದ್ದರು.
ಇದೇ ವಿಷಯ ದೊಡ್ಡದಾಗಿ ಜಗಳವಾಗಿದ್ದು, ಅಲ್ಲಿಗೆ ಬಂದ ಜಾಫ‌ರ್ ಪಟೇಲ್ ಹಾಗೂ ಹಸೀನಾ ಶೇಖ್ ಮೇಲೆ ಮೂರು ಬಾರಿ ಕತ್ತಿ ಬೀಸಿದ್ದರು. ಇಮಾಮ್ ಪಟೇಲ್, ಆಶಾಬಿ ಪಟೇಲ್ ಸಹ ಕೆಟ್ಟದಾಗಿ ನಿಂದಿಸಿದ್ದರು. ಇದನ್ನು ನೋಡಿದ ಅಲ್ಲಿನ ನಾಗೇಂದ್ರ ಹರಿಜನ ಎಂಬುವವರು  ಪೊಲೀಸ್ ದೂರು ನೀಡಿದ್ದರು. ಹಸೀನಾ ಶೇಖ್ ಮೇಲೆ ಕತ್ತಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ನ್ಯಾಯಾಲಯದ (Sirsi Court) ನ್ಯಾಯಾಧೀಶ ಕಿರಣ ಕಿಣಿ ಅವರು ಶುಕ್ರವಾರ ಶಿಕ್ಷೆ ಪ್ರಕಟಿಸಿದ್ದಾರೆ.

ಜಾಫರ ಪಟೇಲ್‌’ಗೆ 10 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ಹಾಗೂ ಆಶಾಬಿ ಪಟೇಲ್‌’ಗೆ 2 ಸಾವಿರ ರೂ ದಂಡ ವಿಧಿಸಿದರು. ಇನ್ನೊಬ್ಬ ಆರೋಪಿ ಇಮಾಮ್ ಪಟೇಲ್ ಸಾವನಪ್ಪಿದ್ದು, ಬದುಕಿರುವ ಇಬ್ಬರು ಸೇರಿ ಗಾಯಾಳು ಹಸೀನಾ ಶೇಖ್ ಅವರಿಗೆ 10 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸಂತ್ರಸ್ತರ ಪರವಾಗಿ ರಾಜೇಶ ಮಳಗಿಕ‌ರ್ ವಾದಿಸಿದ್ದರು.

ಇದನ್ನು ಓದಿ : ಆರಿತು 46 ವರ್ಷ ಬೆಳಗಿದ ಚಿಗಳ್ಳಿ ದೀಪ ! ಕಾದಿದೆಯಾ ಕಂಠಕ.

ಫೆ. 16 ರಂದು ಸಿದ್ದಾಪುರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ

ಜಾತ್ರೆ ಸಂದರ್ಭದಲ್ಲಿ ಪೊಲೀಸ್ ದಾಳಿ. ಆರು ಎಲೆ ಮಾನವರ ಬಂಧನ.

ಇನ್ಮುಂದೆ ಶನಿವಾರ ಅರ್ಧ ದಿನ ಶಾಲೆ.