ಹಳಿಯಾಳ : ತನ್ನ ಸಹೋದರಿಯ ತಂಟೆಗೆ ಬಂದ ಯುವಕನಿಗೆ ವಿದ್ಯಾರ್ಥಿಯೋರ್ವ ಚಾಕು ಇರಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಜನನಿಬಿಡ ಸ್ಥಳದಲ್ಲಿ ನಡೆದಿರುವ ಘಟನೆ ನಾಗರಿಕರಲ್ಲಿ ಆತಂಕ ಉಂಟುಮಾಡಿದೆ .  ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿ ಹಮಾಲಿ ಕೆಲಸ ಮಾಡುವ 24 ವರ್ಷ ವಯಸ್ಸಿನ  ಮಹ್ಮದ ಜಬಿವುಲ್ಲಾ  ಮಹಾಬುಬಲಿ ಮಕೇಸಾಬ  ಚಾಕು ಇರಿತಕ್ಕೆ ಒಳಗಾದವನು. ತಾಲೂಕಿನ ತೇರಗಾಂವ ಗ್ರಾಮದ ನಿವಾಸಿ  20 ವರ್ಷದ ವಿದ್ಯಾರ್ಥಿ  ಮಹಮ್ಮದಕೈಫ್ ನಾಸೀರ ದುರ್ಗದ ಚಾಕು ಇರಿದವ. 

ಮಹ್ಮದ ಜಬಿವುಲ್ಲಾನು  ಮಹಮ್ಮದಕೈಫ್ ನಾಸೀರ ದುರ್ಗದ ಇತನ ಸಹೋದರಿಯ ಹಿಂದೆ ಬಿದ್ದಿದ್ದ ಎನ್ನಲಾಗುತ್ತಿದೆ. ಕಳೆದ 6 ತಿಂಗಳ ಹಿಂದೆ ಇದೇ ವಿಚಾರವಾಗಿ ಗಲಾಟೆ ನಡೆದು ಪ್ರಕರಣ ಕೆಲವು ಮುಖಂಡರ ನಡುವೆ ಇತ್ಯರ್ಥಗೊಳಿಸಲಾಗಿತ್ತು. ಆದರೇ ನಿನ್ನೆ ಶುಕ್ರವಾರ ಇಬ್ಬರು ಎದುರಾದಾಗ ಮತ್ತೇ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ..
ಮಹಮ್ಮದಕೈಫ್  ಈತನು ಮಾವಿನ ಹಣ್ಣು ಕಟ್ ಮಾಡುವ ಚಾಕುವಿಂದ ಮಹ್ಮದಜಬಿವುಲ್ಲಾ ಈತನ ಎಡ ತೋಳಿಗೆ ಹಾಗೂ ಎಡ ಭುಜದ ಹತ್ತಿರ ಹೊಡೆದು ಗಾಯಗೊಳಿಸಿದ್ದಾಗಿ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.