ಬೆಂಗಳೂರು: ಅತ್ಯಾಚಾರ ಆರೋಪದ ಕಾರಣಕ್ಕೆ ವಿದೇಶಲ್ಲಿಯೇ ತಲೆಮರೆಸಿಕೊಂಡಿದ್ದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿದ್ದಾರೆ.
ರಾತ್ರಿ ಪ್ರಜ್ವಲ್ ಇರುವ ವಿಮಾನವನ್ನು ಸಾವಿರಕ್ಕೂ ಅಧಿಕ ಜನರು ಟ್ರ್ಯಾಕ್ ಮಾಡಿದ್ದಾರೆ. ಮ್ಯೂನಿಚ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಮೇ 30ರ ಮಧ್ಯರಾತ್ರಿ 12.30ಕ್ಕೆ ಆಗಮಿಸುವ ವೇಳೆಯೂ ಸುಮಾರು 2,000ಕ್ಕೂ ಅಧಿಕ ಜನರು ನಿದ್ದೆಗೆಟ್ಟು ಅವರ ವಿಮಾನವನ್ನು ಟ್ರ್ಯಾಕ್ ಮಾಡಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾನು ಮೇ 31ರಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಜರ್ಮನಿಯ ಮ್ಯೂನಿಚ್ನಿಂದ ಮೇ 30ರ ರಾತ್ರಿ ಬೆಂಗಳೂರಿಗೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ (ಜರ್ಮನಿ ಕಾಲಮಾನ ಬೆಳಗ್ಗೆ 11 ಗಂಟೆ) ಮ್ಯೂನಿಚ್ನಿಂದ ವಿಮಾನ ನಿಲ್ದಾಣಕ್ಕೆ ಎರಡು ಟ್ರಾಲಿ ಬ್ಯಾಗ್ ಜತೆ ಪ್ರವೇಶ ಮಾಡಿದ್ದರು.
ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಲುಫ್ತಾನ್ನಾ ಏರ್ಲೈನ್ಸ್ ವಿಮಾನದ ಬಿಸಿನೆಸ್ ಕ್ಲಾಸ್ ಸೀಟ್ ನಂಬರ್ 8Gಯಲ್ಲಿ ಕುಳಿತು ಪ್ರಜ್ವಲ್ ರೇವಣ್ಣ ಪ್ರಯಾಣಿಸಿದ್ದರು.
ಇವರಿರುವ ವಿಮಾನದ ಕಡೆ ಮಧ್ಯರಾತ್ರಿಯಾದರೂ ಸುಮಾರು ಜನರು ಟ್ರ್ಯಾಕ್ ಮಾಡಿದ್ದಾರೆ. ಪೊಲೀಸರು, ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು, ಸಾರ್ವಜನಿಕರು ಹಾಗೂ ವಿಮಾನದಲ್ಲಿರುವ ಇತರೆ ಪ್ರಯಾಣಿಕರ ಕುಟುಂಬದವರು ಸೇರಿದ್ದಾರೆ.
ಕಳೆದ 34 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಅವರ ಶರಣಾಗತಿಗೆ ಅವರ ತಾತಾ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಂದೇಶ ಕಳಿಸಿದ್ದರು. ಅಲ್ಲದೆ ಎಸೈಟಿ ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರಿಂದ ಪ್ರಜ್ವಲ್ ಬೆಂಗಳೂರಿಗೆ ಹಾರಿ ಬಂದಿದ್ದಾರೆ.