ಭಟ್ಕಳ: ಮೂವರು ಅಪರಿಚಿತರು ತನ್ನ ಮಗುವನ್ನ ಕಿಡ್ನಾಪ್ ಮಾಡಿದ್ದರೆಂದು ದಾಂಡೇಲಿ ವ್ಯಕ್ತಿಯೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾಂಡೇಲಿ ಮೂಲದ ಹುಸೇನಸಾಬ್ ಎನ್ನುವವರು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದವರು. ಎಂಟು ತಿಂಗಳ ಹಿಂದೆ ತನ್ನ ಹೆಂಡತಿ ತಾಯಿಯ ಮೃತಪಟ್ಟಾಗ ಭಟ್ಕಳ ಮೂಲದ ಓರ್ವ ಓರ್ವ ಗಂಡಸು ಹಾಗೂ ಓರ್ವ ಹೆಂಗಸು ಅಂತ್ಯ ಸಂಸ್ಕಾರಕ್ಕೆ ಬಂದು ತಮ್ಮ ಪರಿಚಯ ಮಾಡಿಕೊಂಡಿದ್ದರು. ನಮಗೆ ಸಾಂತ್ವನ ಹೇಳಿ ಅವರ ಮೊಬೈಲ್ ನಂಬರ ನೀಡಿ ಹೋಗಿದ್ದರು. ಬಳಿಕ ನಮಗೆ ಕರೆ ಮಾಡಿ ಒಂದು ದಿನ ಭಟ್ಕಳಕ್ಕೆ ಬಂದು ಹೋಗುವಂತೆ ಒತ್ತಾಯ ಮಾಡುತ್ತಿದ್ದರು. ಹೀಗಾಗಿ ಜೂನ್ 18 ರ ಸಂಜೆ 6 ಗಂಟೆಗೆ ದಾಂಡೇಲಿಯಿಂದ ಹೊರಟು ರಾತ್ರಿ 10 ಗಂಟೆಗೆ ಭಟ್ಕಳ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆಲ್ ಖಲೀಜ್ ಹೋಟೆಲ್ ಬಳಿ ಬಂದು ಮೊಬೈಲ್ ಗೆ ಕರೆ ಮಾಡಿದಾಗ ಅಂತ್ಯ ಸಂಸ್ಕಾರಕ್ಕೆ ಬಂದ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸರು ಸೇರಿ ಒಟ್ಟು ಮೂವರು ಬಂದು ನಮ್ಮನ್ನು ಮಾತನಾಡಿಸಿದ್ದರು. ಆಗ ತನ್ನ ಹೆಂಡತಿ ಬಳಿ ಇದ್ದ ಏಳು ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ. ನೀವು ಇಲ್ಲಿಯೇ ಇರಿ ಎಂದು ಹೋದವರು ವಾಪಾಸ್ ಬಂದಿಲ್ಲ. ಜೂನ್ 20 ರಂದು ಅವರಿಗೆ ಕರೆ ಮಾಡಿದಾಗ ತಾವೇ ಮಗುವನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ಜೂನ್ 21 ರ ಮಧ್ಯಾಹ್ನ 3.30ಕ್ಕೆ ನಮ್ಮ ಮೊಬೈಲ್ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೋರಿಸಿ ಮಗು ಆರಾಮವಾಗಿ ಇದೆ ಚಿಂತೆ ಬೇಡ ನಿಮ್ಮ ಮಗುವನ್ನು ತಂದು ಕೊಡುತ್ತೇವೆ ಎಂದು ಹೇಳಿ ಪುನಃ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.
ಹೀಗಾಗಿ ಮಗುವನ್ನ ಕಳೆದುಕೊಂಡ ಕುಟುಂಬದವರಿಗೆ ಮೋಸದ ಅರಿವಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಮೂವರ ವ್ಯಕ್ತಿಗಳ ವಿರುದ್ಧ ಮಗುವನ್ನು ಅಪಹರಣ ಮಾಡಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ.