ಕಾರವಾರ(Karwar) : ತಾಲೂಕಿನ ಬಿಣಗಾ ಗ್ರಾಮದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸಿಂ ಇಂಡಸ್ಟ್ರೀಸ್(Grasim Industry) ಕಂಪನಿಯಲ್ಲಿ ಕಾರ್ಮಿಕರ ಸುರಕ್ಷತೆ ಕಾಪಾಡುವಲ್ಲಿ ಕಂಪನಿ ವಿಫಲವಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ.

ಬಿಣಗಾದ ಬಿಲ್ಟ್ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕೆಲಸವನ್ನ ಮಾಡುತ್ತಿದ್ದಾರೆ. ಕಂಪನಿಗೆ ತನ್ನದೇ ಆದ ಹೆಸರಿದೆ. ಆದರೆ ಇಂತಹ ದೊಡ್ಡ ಕಂಪನಿಯಲ್ಲಿ ಮುಂಜಾಗೃತೆ ತೆಗೆದುಕೊಳ್ಳದೇ ರಾಸಾಯನಿಕ ಸೋರಿಕೆ ಆಗುತ್ತಿರುವುದು ದುರಂತದ ವಿಚಾರ.

ಕೆಲ ದಿನದ ಹಿಂದೆಯೇ ಕಾರವಾರ ತಾಲೂಕಿನ ಯುವಕನೋರ್ವ ಕಂಪನಿಯಲ್ಲಿ ನಡೆದಿದ್ದ ಕ್ಲೋರಿನ್ ಸೋರಿಕೆಯಿಂದ(Chlorine Leakage) ಅಸ್ವಸ್ಥಗೊಂಡು ಮೃತಪಟ್ಟಿದ್ದ. ಇದಾದ ನಂತರ ಕಂಪನಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಮಿಕರ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿತ್ತು.

ಆದರೆ ಶನಿವಾರ ಮತ್ತೆ ಕ್ಲೋರಿನ್ ಸೋರಿಕೆಯಿಂದ ಹದಿನೆಂಟು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.‌ ಪದೇ ಪದೇ ಈ ರೀತಿ ರಾಸಾಯನಿಕ ಸೋರಿಕೆ ಆಗುತ್ತಿದ್ದರೆ ಕಾರ್ಮಿಕರ ಸುರಕ್ಷತೆ ‌ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯಾಗಿದೆ.

ಶನಿವಾರ ನಡೆದ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಒಂದೊಮ್ಮೆ ದೊಡ್ಡ ಮಟ್ಟದಲ್ಲಿ ಸೋರಿಕೆಯಾದರೆ ಪ್ರಾಣಾಪಾಯ ಸಹ ಆಗಬಹುದು. ಕಾರ್ಮಿಕರ ಸುರಕ್ಷತೆ ಕೈಗೊಳ್ಳದ ಕಂಪನಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್. ಜಿಲ್ಲಾ ಕಾರ್ಯಾಧ್ಯಕ್ಷ ರೋಷನ್ ಹರಿಕಂತ್. ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ್. ಕಾರವಾರ ತಾಲೂಕ ಅಧ್ಯಕ್ಷ ಮೋಹನ್ ಉಳ್ಳೇಕರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನು ಓದಿ : ಬಿಗ್ ಬಾಸ್ ವೀಕ್ಷಕರಿಗೆ ಶಾಕ್. ಫೈರ್‌ಬ್ರಾಂಡ್ ಚೈತ್ರಾ ಕುಂದಾಪುರ ಔಟ್.

ಗ್ರಾಮಸ್ಥರ ಪ್ರತಿಭಟನೆಗೆ ಬೆಂಡಾದ ಗ್ರಾಸಿಮ್ ಕಂಪನಿ ಅಧಿಕಾರಿಗಳು. ಕಾರ್ಖಾನೆ ತಾತ್ಕಾಲಿಕ ಬಂದ್.

ಶಿರಸಿಯಲ್ಲಿ ಹುಲ್ಲಿನ ಲಾರಿಗೆ ಬೆಂಕಿ. ಸ್ಥಳದಲ್ಲಿ ಆತಂಕ.

ಬೈಕ್ ನಲ್ಲಿ ರೋಮ್ಯಾನ್ಸ್, ಟೈಟಾನಿಕ್ ರೂಪ, ವೀಲಿಂಗ್. ಈತನ ಹುಚ್ಚು ಸಾಹಸಕ್ಕೆ ಪೊಲೀಸರ ಬೆಸ್ತು.

ಬಿಣಗಾ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಸೋರಿಕೆ. ಹಲವರು ಅಸ್ವಸ್ಥ . ಸ್ಥಳದಲ್ಲಿ ಬಿಗುವಿನ ವಾತಾವರಣ.