ಶಿರಸಿ (Sirsi): ನಗರದ ಜೂ ಸರ್ಕಲ್(Zoo Circle) ಬಳಿ ಹುಲ್ಲು ಹೊತ್ತೋಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ(Fire) ತಗುಲಿದೆ. ಪರಿಣಾಮವಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮುಂಡಗೋಡದಿಂದ ಶಿರಸಿ ತಾಲೂಕಿನ ಒಣಿಕೆರೆಗೆ ಲಾರಿ ಹೋಗುತ್ತಿದ್ದಾಗ ತುಂಬಿದ ಲಾರಿಗೆ ಬೆಂಕಿ ಬಿದ್ದಿದೆ. ಶಿರಸಿ ಹಳೆ ತಹಶಿಲ್ದಾರ ಕಚೇರಿ ಎದುರು ನಗರ ಠಾಣೆಯ ಪೋಲಿಸ್ ವಸತಿ ಗೃಹದ (Police House)ಎದುರಿಗೆ ಈ ಅವಘಡ ನಡೆದಿದೆ. ಲಾರಿಯಲ್ಲಿ ಹುಲ್ಲು ತುಂಬಿದ ತೆರಳುತ್ತಿದ್ದಾಗ ವಿದ್ಯುತ್ ತಂತಿ(Electricity line) ತಾಗಿ ಸ್ಪಾರ್ಕ್ ಆಗಿದೆ. ಬೆಂಕಿಯ ಕಿಡಿ ಬಿದ್ದಾಗ ಲಾರಿಯಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳದಲ್ಲಿ ದಟ್ಟ ಹೊಗೆ ಅವರಿಸಿತ್ತು.

ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸಾರ್ವಜನಿಕರ ಸಹಾಯದಿಂದ ಸಂಭವಿಸಬಹುದಾದ ಬಾರೀ ದುರಂತ  ತಪ್ಪಿದೆ.

ಇದನ್ನು ಓದಿ : ಬೈಕ್ ನಲ್ಲಿ ರೋಮ್ಯಾನ್ಸ್, ಟೈಟಾನಿಕ್ ರೂಪ, ವೀಲಿಂಗ್. ಈತನ ಹುಚ್ಚು ಸಾಹಸಕ್ಕೆ ಪೊಲೀಸರ ಬೆಸ್ತು.

ಬಿಣಗಾ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಸೋರಿಕೆ. ಹಲವರು ಅಸ್ವಸ್ಥ . ಸ್ಥಳದಲ್ಲಿ ಬಿಗುವಿನ ವಾತಾವರಣ.

ಕಾಡಿನಲ್ಲಿ ಪೊಲೀಸರ ಕಾರ್ಯಾಚರಣೆ. ಶಸ್ತ್ರಾಸ್ತ್ರಗಳು ಪತ್ತೆ.

ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನಕ್ಕೆ ಬೆಂಕಿ.

ಉದ್ಯಮಿ ಕಿಡ್ನಾಪ್ ಪ್ರಕರಣ. ನಟೋರಿಯಸ್ ಕಿಡ್ನಾಪರ್ಸ್ ಮೇಲೆ ಪೊಲೀಸರ ಪೈರಿಂಗ್.