FOREST NEWS.ಹಳಿಯಾಳ : ಹಳಿಯಾಳ(HALIYAL) -ದಾಂಡೇಲಿ(DANDELI)-ಜೋಯಿಡಾ- ವಿಧಾನ ಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅನಧಿಕೃತ ರೆಸಾರ್ಟ್(RESORT), ಹೋಮ್ ಸ್ಟೇ(HOME STAY), ಹೋಟೆಲ್, ತೋಟಗಳನ್ನು ತೆರವುಗೊಳಿಸಿ, ತೆರವಾದ ಜಾಗೆಯಲ್ಲಿ ಸಸಿ ನೆಟ್ಟು ಕಿರು ಅರಣ್ಯ(FOREST)ಗಳನ್ನು ಬೆಳೆಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ತಿಳಿಸಿದೆ.
ಇದಕ್ಕೆ ಸಂಬಂಧಿಸಿ ಮನವಿ ನೀಡಿದ ಕಾರ್ಯಕರ್ತರು, “ಪ್ರಕೃತಿಯ ವಿರುದ್ಧ ಮನುಷ್ಯ ಏನೇ ಬುದ್ಧಿವಂತಿಕೆ ಸಾಧಿಸಿದರೂ ಕೂಡಾ, ಪ್ರಕೃತಿಯ ಎದುರಿಗೆ ಮನುಷ್ಯ ತುಂಬಾ ಚಿಕ್ಕವನು ಮತ್ತು ಅತ್ಯಂತ ಅಸಹಾಯಕ” ಎಂಬ ತ್ರಿಕಾಲ ಸತ್ಯ, ಶಿರೂರು(SHIRURU) ಮತ್ತು ಕೇರಳ(KERAL)ದ ವೈನಾಡು(WAYNADU) ಗುಡ್ಡ ಕುಸಿತ ಪ್ರಕರಣಗಳಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಈ ಎರಡು ಪ್ರಕರಣಗಳು ಸರಕಾರಗಳಿಗೆ ಮಾತ್ರವಲ್ಲ,ನಾಗರೀಕ ಜಗತ್ತಿಗೂ ಕೂಡಾ ಎಚ್ಚರಿಕೆಯ ಗಂಟೆ ಆಗಿವೆ ಎಂದು ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹೇಳಿದ್ದಾರೆ.
ಹಳಿಯಾಳ ಮತ ಕ್ಷೇತ್ರ ದಟ್ಟಡವಿಗೆ ಹೆಸರಾದಷ್ಟೇ ವ್ಯಾಪಕವಾಗಿ, ಅದರ ಒತ್ತುವರಿಗೂ ಕೂಡಾ ಹೆಸರಾಗಿದೆ. ಆದ್ದರಿಂದ ನಾವಿಂದು, ನಮ್ಮ ಮತ್ತು ನಮ್ಮ ನಂತರದ ತಲೆಮಾರುಗಳ ಹಾಗು ಪ್ರಾಣಿ, ಪಕ್ಷಿಗಳ ಹಿತದೃಷ್ಟಿಯಿಂದ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ಎಲ್ಲೆಂದರಲ್ಲಿ ಅನಧಿಕೃತ ರೆಸಾರ್ಟ್, ಹೋಟೆಲ್, ಹೋಮ್ ಸ್ಟೇ, ತೋಟಗಳು ತಲೆ ಎತ್ತಿವೆ. ಇವುಗಳನ್ನು ನಿರ್ಮಿಸುವುದಕ್ಕಾಗಿ ಸಂಬಂಧಪಟ್ಟವರು ಬಹಳ ದೊಡ್ಡ ಪ್ರಮಾಣದಲ್ಲಿ ಅರಣ್ಯವನ್ನು ನಾಶ ಮಾಡಿದ್ದಾರೆ. ಪರಿಣಾಮ ಭೂ ಸವಳಿಕೆ, ಭೂಸಾರ ಸವಳಿಕೆ, ಭೂ ಕುಸಿತ, ಗುಡ್ಡ ಕುಸಿತ, ವನ್ಯ ಜೀವಿಗಳ ನಾಶ ಮತ್ತು ವಲಸೆ, ಅರಣ್ಯ ನಾಶದಂತಹ ಹಲವಾರು ಅವಘಡಗಳು ಸಂಭವಿಸಿವೆ ಮತ್ತು ಸಂಭವಿಸುತ್ತಿವೆ.
ಯಥಾ ಸ್ಥಿತಿ ಮುಂದುವರೆಯುವುದಕ್ಕೆ ಬಿಟ್ಟರೆ, ಶಿರೂರು ಮತ್ತು ವೈನಾಡು ದುರಂತಗಳು ನಮ್ಮಲ್ಲೂ ಕೂಡಾ ಸಂಭವಿಸುವ ಸಾಧ್ಯತೆಗಳು ಇವೆ. ಆದ್ದರಿಂದ ವಾಣಿಜ್ಯ ಕಾರಣಗಳಿಗಾಗಿ ಅತಿಕ್ರಮಿಸಲ್ಪಟ್ಟಿರುವ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು, ಆ ಭೂಮಿಯಲ್ಲಿ ಗಿಡಗಳನ್ನು ನೆಟ್ಟು, ಕಿರು ಅರಣ್ಯಗಳನ್ನು ಸೃಷ್ಟಿಸಬೇಕು. ಆ ಮೂಲಕ ಪರಿಸರದ ಸಮತೋಲನ ಸಾಧಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಒತ್ತಾಯಿಸಿದೆ.
ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಅವರಿಗೆ ಮನವಿ ನೀಡಿದೆ.
ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ವಿನೋದ್ ದೊಡ್ಡಮನಿ, ಚಂದ್ರಕಾಂತ ದುರ್ವೆ, ಕಾರ್ಯದರ್ಶಿ ಮಹೇಶ್ ಆಣೇಗುಂದಿ, ಸುರೇಶ್ ಕೊಕಿತಕರ, ಸುಧಾಕರ ಕುಂಬಾರ, ಪರಶುರಾಮ ಶಹಾಪೂರಕರ, ನಾಗೇಶ ಹೆಗಡೆ, ಲಕ್ಷ್ಮಣ ಪೆಡ್ನೆಕರ, ಆನಂದ ಮಠಪತಿ, ಈರಯ್ಯ ಹಿರೇಮಠ , ಪ್ರಭು ದೇಸಾಯಿ ಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನು ಓದಿ. ಸೇತುವೆಗೆ ಬೀದಿದೀಪ ಅಳವಡಿಸಿ.