ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (karwar): ಭಾರತೀಯ ನೌಕಾಪಡೆಯ(Indian Navy) ನೌಕೆ INS ಸುನೈನಾ ಇನ್ಮುಂದೆ ಹಿಂದೂ ಮಹಾಸಾಗರದ ಪ್ರದೇಶ ವ್ಯಾಪ್ತಿಯಲ್ಲಿ  ಭದ್ರತೆ ಮತ್ತು ಸುರಕ್ಷತೆ ವಹಿಸಲಿದೆ.

ಒಂಬತ್ತು ಸ್ನೇಹಪರ ವಿದೇಶಿ ರಾಷ್ಟ್ರಗಳ  ಸ್ನೇಹದೊಂದಿಗೆ 44 ನೌಕಾ ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲಿದೆ. ಕೇಂದ್ರ ರಕ್ಷಣಾ ಸಚಿವ (Defence Minister) ರಾಜನಾಥ್ ಸಿಂಗ್(Rajanath Sing) ಇಂದು ಕಾರವಾರದಿಂದ  ಚಾಲನೆ ನೀಡಿದರು. ಪ್ರಾದೇಶಿಕ ಕಡಲ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಭಾರತದ ಬದ್ಧತೆಯನ್ನು ಬಲಪಡಿಸುವಲ್ಲಿ ಈ ಕಾರ್ಯಾಚರಣೆಯು ಮಹತ್ವದ ಹೆಜ್ಜೆಯಾಗಿದೆ.

ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಹಿಂದು ಮಹಾಸಾಗರ ವಲಯ ರಕ್ಷಣಾ ಕಾರ್ಯಾಚರಣೆ ನಡೆಸುವ ಭಾರತದ ಮಹತ್ವದ ಹೊಸ ಹೆಜ್ಜೆಯಾಗಿದೆ. ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ(Cheena) ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬೆನ್ನಲ್ಲೇ  ಮಿತ್ರ ರಾಷ್ಟ್ರಗಳ ಒಡಗೂಡಿ ಹಿಂದು ಮಹಾಸಾಗರದಲ್ಲಿ ಕಾರ್ಯಾಚರಣೆಗೆ ಇಳಿದಿದೆ.

ಭಾರತ ಪಶ್ಚಿಮ ಕರಾವಳಿಯ ಸ್ಪೆಷಲ್‌ ಇಕನಾಮಿಕ್‌ ಜೋನ್‌ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈ ನೌಕೆಯಲ್ಲಿ ಕೇನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್‌, ಸೇಂಚ್‌ಹೆಲ್ಸ್‌ ಸೇರಿ 9  ದೇಶಗಳ 44 ಸಿಬ್ಬಂದಿ ಇದ್ದು, ಅವರಿಗೆ  ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ಜಪ್ತು, ಅಗ್ನಿ ಶಮನ, ಸಾಗರ ಸಂವಹನ, ಸೀಮೆನ್‌ಶಿಪ್‌, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವುದು  ಸೇರಿ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ.

“ಒನ್‌ ಓಶನ್‌ ಒನ್‌ ಮಿಷನ್‌” (One Ocean One Mission) ಎಂಬ ಕಾರ್ಯಕ್ರಮದಡಿಯಲ್ಲಿ ಭಾರತ ಈ ಹೆಜ್ಜೆ ಇಟ್ಟಿದೆ. ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ(Bharat) ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ  ಹಿಂದು ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ  ಹೊರಟಿದೆ.

ಕಾರವಾರದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌(Rajanath Sing) ಅವರು 2ಸಾವಿರ ಕೋಟಿ ರೂ ವೆಚ್ಚದ ಕಾರವಾರದ ಸೀಬರ್ಡ್‌ ನೌಕಾ ಯೋಜನೆಯ ಎರಡನೇ ಹಂತದ ವಿಸ್ತರಣೆಯ ವಿವಿಧ ಕಾಮಗಾರಿಗಳನ್ನು ಉದ್ಘಾಟಿದರು.  ಸಂಸದ ವಿಶೇಶ್ವರ್ ಹೆಗಡೆ ಕಾಗೇರಿ ಸೇರಿದಂತೆ ನೌ ಸೇನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಓದಿ : ಮನೆಗೆ ನುಗ್ಗಿದ ಕಳ್ಳರು. ನಗದು, ಬಂಗಾರ ಬೆಳ್ಳಿಯ ಒಡವೆ ಕಳ್ಳತನ.