ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಶಕ್ತಿ ಸ್ಥಳ ಶ್ರೀ ಚೆನ್ನಪಟ್ಟಣ ಹನುಮಂತ(Chennapattana Hanumanth) ದೇವರ ಬ್ರಹ್ಮ ರಥೋತ್ಸವ ಏಪ್ರಿಲ್ 6ರಂದು ನಡೆಯಲಿದೆ.

ದೇವಸ್ಥಾನದ ಧ್ವಜಾರೋಹಣ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಪೂರ್ವ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ 30 ಭಾನುವಾರದಂದು ಆರಂಭಗೊಂಡಿದ್ದು,  ಜಾತ್ರಾ ಮಹೋತ್ಸವದ ಸಕಲ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿದೆ.

ರಥೋತ್ಸವದ(Rathotsava) ಪೂರ್ವ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು ಹೋಮ ಹವನಾದಿಗಳು ನಡೆದವು. ನಂತರ ಗರುಡನ ಪಟವನ್ನು ಪೂಜಿಸಿ, ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ರಥೋತ್ಸವದ ವಿಧಿವಿಧಾನಗಳು ವಿದ್ಯುಕ್ತವಾಗಿ ಆರಂಭಗೊಂಡಿತು. ಮಾರ್ಚ್ 30ರಂದು ಬೆಳಿಗ್ಗೆ ಧ್ವಜಾರೋಹಣದ ನಂತರ ಸಂಜೆ ಶಿಭಿಯಾ ಯಂತ್ರೋತ್ಸವ, ಮಾರ್ಚ 31ರಂದು ಶಿಖಿವಾಹನೋತ್ಸವ, ಎಪ್ರಿಲ್ 1 ರಂದು ಡೋಲಾ ಯಂತ್ರೋತ್ಸವ, ಎಪ್ರಿಲ್ 2 ರಂದು ಪುಷ್ಪ ಮಂಟಪೋತ್ಸವ, ಎಪ್ರಿಲ್ 3 ರಂದು ಅತಿವೇಗ ವಾಹನೋತ್ಸವ, ಎಪ್ರಿಲ್ 4 ರಂದು ಗಜವಾಹನೋತ್ಸವ ಹಾಗೂ ರಾತ್ರಿ ಪುಷ್ಪ ರಥೋತ್ಸವ ನಡೆದವು.

ಎಪ್ರಿಲ್ 5 ರಂದು ಸಿಂಹವಾಹನೋತ್ಸವ ಹಾಗೂ ರಾತ್ರಿ ಪುಷ್ಪ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ರಥವನ್ನು ಎಳೆದು ಪುನೀತರಾದರು.  ಎಪ್ರಿಲ್ 6 ರಂದು ಬೆಳಿಗ್ಗೆ ರಥಾರೋಹಣ ನಡೆಯಲಿದ್ದು ರಥ ಕಾಣಿಕೆ ಸಮರ್ಪಣೆಯೊಂದಿಗೆ ಸಂಜೆ 5 ಗಂಟೆಗೆ ಬ್ರಹ್ಮರಥೋತ್ಸವ(Brahma Rathotsava) ಬಹಳ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ನಡೆಯಲಿದೆ.

ಎಪ್ರಿಲ್ 7ರಂದು ಅಶ್ವವಾಹನೋತ್ಸವ, ಚೂರ್ಣೋತ್ಸವ, ಅವಭ್ರತದೊಂದಿಗೆ ಜಾತ್ರಾ ಧಾರ್ಮಿಕ ಉತ್ಸವಗಳು ಮುಕ್ತಾಯವಾಗಲಿದೆ. ಅದೇ ದಿನ ರಾತ್ರಿ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಈಗಾಗಲೇ  ಸುಂದರ ರಥಕ್ಕೆ ಬಣ್ಣ ಬಳಿದು, ರಥ ಕಟ್ಟುವ ಕಾರ್ಯ ಮುಕ್ತಾಯಗೊಂಡಿದೆ.  ರಥೋತ್ಸವದ ಅಂಗವಾಗಿ ದಿನವೂ ಕೂಡಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಪ್ರತಿ ದಿನವೂ ದೇವರ ಉತ್ಸವ ನಡೆದು ಬ್ರಹ್ಮರಥೋತ್ಸವದ ಪೂರ್ವ ದಿನದಂದು ಪುಷ್ಪ ರಥೋತ್ಸವವು ಜರುಗಿದೆ. ಜಾತ್ರೆಗಾಗಿ ಇಡೀ ಭಟ್ಕಳ ತಾಲೂಕಿನ ಜನತೆ  ಸಜ್ಜುಗೊಂಡಿದ್ದು  ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. 
ಇದನ್ನು ಓದಿ : ವೈರಿಗಳ ಸದ್ದಡಗಿಸಲು ಸಜ್ಜಾಗುತ್ತಿದೆ ಭಾರತ. ಒನ್ ಓಷನ್ ಒನ್ ಮಿಷನ್.