ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮೈಸೂರು(Mysore): ತನ್ನ ಗರ್ಭಿಣಿ ಪತ್ನಿಯನ್ನು ಹೆರಿಗೆಗೆ(Dilevary) ದಾಖಲಿಸಿ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದ ವ್ಯಕ್ತಿ  ಮೃತಪಟ್ಟಿರುವ ಘಟನೆ ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ(Mysore Cheluvamba Hospital) ನಡೆದಿದೆ.

ನಾಗೇಶ್ (47) ಮೃತಪಟ್ಟ ವ್ಯಕ್ತಿ. ಚಾಮರಾಜನಗರ ಜಿಲ್ಲೆ(Chamarajanagar) ಗುಂಡ್ಲುಪೇಟೆ ತಾಲೂಕು(Gundlupete) ಚೌಡಳ್ಳಿ ಗ್ರಾಮ ನಿವಾಸಿ ಎನ್ನಲಾಗಿದೆ. ನಾಗೇಶ್ ರವಿವಾರ ರಾತ್ರಿ 10:30ರ ಸುಮಾರಿಗೆ ಆಸ್ಪತ್ರೆಯ ಹೊರ ಆವರಣದಲ್ಲಿ ಮಲಗಿದ್ದರು. ಮಾರನೇ ದಿನ ಬೆಳಗ್ಗೆ ನೋಡಿದಾಗ ಮಲಗಿದಲ್ಲೇ ಮೃತಪಟ್ಟಿದ್ದರೆ. ಅವರು ವಿಪರೀತವಾಗಿದ್ದ ಚಳಿ ತಡೆಯಲಾರದೆ ಮೃತಪಟ್ಟಿರುವ ಬಗ್ಗೆ ಮನೆಯವರು ಶಂಕಿಸಿದ್ದಾರೆ.

ಶುಕ್ರವಾರದ ದಿನ ನಾಗೇಶ್ ತನ್ನ ಪತ್ನಿಯನ್ನು ಹೆರಿಗೆಗೆಂದು  ಗುಂಡ್ಲುಪೇಟೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ನಾಗೇಶ್ ಅವರು ಪತ್ನಿಯನ್ನು ಚೆಲುವಾಂಬ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದು ಶನಿವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ನಡುವೆ ಕಳೆದ ಮೂರು ರಾತ್ರಿಯೂ ನಾಗೇಶ್ ಆಸ್ಪತ್ರೆಯ ಹೊರ ಆವರಣದಲ್ಲಿ ಚಾಪೆ ಹಾಸಿ ಮಲಗುತ್ತಿದ್ದರೆನ್ನಲಾಗಿದೆ. ಹಾಗೆ ರವಿವಾರ ರಾತ್ರಿ ಆಸ್ಪತ್ರೆಯ ಹೊರಗಡೆ ಮಲಗಿದ್ದ ನಾಗೇಶ್ ಸೋಮವಾರ ಬೆಳಗ್ಗೆ ಗಮನಿಸಿದಾಗ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ನಾಗೇಶ್ ಮದ್ಯಪಾನದ ಚಟ ಕೂಡಾ ಹೊಂದಿದ್ದರೆನ್ನಲಾಗಿದೆ.

ಸಾವಿನ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ಬರುವವರಿಗೆ ತಂಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಅಲ್ಲಿ ಉಚಿತವಾಗಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಬಿಪಿಎಲ್ (BPL) ಪಡಿತರ ಚೀಟಿ ಇಲ್ಲದವರಿಗೆ 30 ರೂ. ಶುಲ್ಕ ಮಾಡಲಾಗುತ್ತಿದೆ. ಆದರೆ ಹೆಚ್ಚಿನ ಜನರು ಈ ಕೊಠಡಿ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಹೊರಗಡೆಯಲ್ಲೇ ಮಲಗುತ್ತಾರೆ. ಈ ವೇಳೆ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನೈಜ ಕಾರಣ ತಿಳಿದು ಬರಲಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಸುಧಾ ತಿಳಿಸಿದ್ದಾರೆ.
ಇದನ್ನು ಓದಿ : ಕರ್ತವ್ಯದಲ್ಲಿರುವಾಗಲೇ ಹವಾಲ್ದಾರ್ ಮೃತ. ಇಲಾಖೆಗೆ ಕೊನೆಯ ಸೆಲ್ಯೂಟ್ ಹೊಡೆದ ನಿತ್ಯಾನಂದ.

ಅಯ್ಯಪ್ಪ ಭಕ್ತರ ಮೇಲೆ ಕಾರು ಹರಿಸಿದ ಚಾಲಕ. ಆಕ್ರೋಶಕ್ಕೆ ಕಾರಿನ ಗಾಜು ಪುಡಿಪುಡಿ.

ಭಕ್ತ ಸಾಗರ ನಡುವೆ ಅಳ್ವೆಕೋಡಿ  ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ.

ಸಂಸದರ ಮನೆಯ ಬಳಿ ಹೊಂಚು ಹಾಕಿದ ರಣಬೇಟೆಗಾರ.