ಭಟ್ಕಳ(Bhatkal) : ಸಹಸ್ರಾರು  ಸಂಖ್ಯೆಯ ಭಕ್ತರ ಭಕ್ತಿ-ಭಾವದಿಂದ  ಮುರ್ಡೇಶ್ವರ(Murdeshwar) ದೇವರ ಮಹಾರಥೋತ್ಸವ(Maha Rathotsava)  ಸಂಪನ್ನಗೊಂಡಿತು.

ಜಾತ್ರೋತ್ಸವದಲ್ಲಿ ಭಕ್ತರು ರಥಕಾಣಿಕೆ ಸಲ್ಲಿಸಿ ದೇವರಿಗೆ ಪೂಜೆ ನೆರವೇರಿಸಿದರು. ಮಹಾರಥೋತ್ಸದ (Maharathotsava) ಪೂರ್ವದಲ್ಲಿ ತೆಂಗಿನಕಾಯಿಯನ್ನು ಒಡೆಯುವ ಕ್ರಮ ಜರುಗಿದ ನಂತರ ರಥವನ್ನು ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಎಳೆಯಲಾಯಿತು. ಓಲಗ ಮಂಟಪದ ಹತ್ತಿರ ರಥದ ಎಳೆಯುವುದಕ್ಕೂ ಪೂರ್ವ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಂತೆಯೇ ದೇವಸ್ಥಾನದ ವತಿಯಿಂದ ಆಡಳಿತ ಧರ್ಮದರ್ಶಿ ಸತೀಶ ಆರ್. ಶೆಟ್ಟಿ, ಸಚಿವ ಮಂಕಾಳ ವೈದ್ಯ ತೇರು ಎಳೆಯಲು ಚಾಲನೆ ನೀಡಿದರು.

ಪ್ರತಿ ವರ್ಷವೂ ಮಕರ ಸಂಕ್ರಮಣದಂದು (Makara Samkramana) ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ, ಮೊದಲನೇ ದಿನ ಮೃತ್ತಿಕಾಹರಣ, ಧ್ವಜಾರೋಹಣ, ಬೀಜವಾಹನ, ಭೇರಿತಾಡನ, ಐನಬಲಿ, ಶಿಬಿಕಾ ಯಂತ್ರೋತ್ಸವ, ಎರಡನೇ ದಿನ ಮಯೂರ ಯಂತ್ರೋತ್ಸವ, ಮೂರನೇ ದಿನ ಗಜ ಯಂತ್ರೋತ್ಸವ, ನಾಲ್ಕನೇ ದಿನ ವೃಷಭ ಯಂತ್ರೋತ್ಸವ, ಐದನೇ ದಿನ ಡೋಲಾ ಯಂತ್ರೋತ್ಸವ ಹಾಗೂ ಆರನೇ ದಿನ ಮಹಾ ರಥೋತ್ಸವ ಜರುಗಿತು. ಎಂಟನೇ ದಿನ ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ ಇತ್ಯಾದಿಗಳೊಂದಿಗೆ ರಥೋತ್ಸವ ಸಂಪನ್ನಗೊಂಡಿದೆ.

ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಜಯರಾಮ ಅಡಿಗಳ್ ಹಾಗೂ ವೇ.ಮೂ. ಶಿವರಾಮ ಅಡಿಗಳ್ ಅವರು  ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಮುಖರಾದ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಈಶ್ವರ ಎನ್. ನಾಯ್ಕ, ಈಶ್ವರ ದೊಡ್ಮನೆ, ಗ್ರಾ.ಪಂ.ಅಧ್ಯಕ್ಷೆ ನಾಗರತ್ನಾ ಪಡಿಯಾರ್, ನಯನಾ ನಾಗೇಶ ನಾಯ್ಕ, ಸದಸ್ಯ ಕೃಷ್ಣ ಜೆ. ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರು, ಊರಿನ ಪ್ರಮುಖರು ಉಪಸ್ಥಿತರಿದ್ದರು. ರಥೋತ್ಸವವು ಅತ್ಯಂತ ಶಾಂತ ರೀತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.  ಡಿ.ವೈ.ಎಸ್.ಪಿ. ಮಹೇಶ ಅವರ ನೇತೃತ್ವದಲ್ಲಿ ಸಿ.ಪಿ.ಐ. ವಸಂತ ಆಚಾರಿ, ಸಬ್ ಇನ್ಸಪೆಕ್ಟರ್ ಹನುಮಂತ ಬೀರಾದಾರ ಸೇರಿದಂತೆ ವಿವಿಧ ಸ್ಥರದ ಅಧಿಕಾರಿಗಳು ಬಂದೋಬಸ್ತ್ ವಹಿಸಿದ್ದರು.

ಇದನ್ನು ಓದಿ : ಮಣಿ ಮಾರುವ ಹುಡುಗಿ ಕುಂಭಮೇಳದಲ್ಲಿ ಫೇಮಸ್. ಕಾಟ ತಾಳಲಾರದೆ ಸಂಕಷ್ಟ.

ಆಪತ್ಕಾಲದಲ್ಲಿ ನೆರವಿಗೆ ಬಾರದ 108 ಆಂಬುಲೆನ್ಸ್, ವ್ಯಕ್ತಿ ಸಾವು. ಮೃತದೇಹವಿಟ್ಟು ಪ್ರತಿಭಟನೆ.

ಹೊನ್ನಾವರದಲ್ಲಿ ಗೋಗಳ್ಳರ ಅಟ್ಟಹಾಸ. ಸ್ಥಳೀಯರ ಆಕ್ರೋಶ

ಕಾರವಾರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಮುಕ್ತ ಸ್ಪರ್ಧೆ.