ಭಟ್ಕಳ(BHATKAL): ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಬಾಂಗ್ಲಾ (BANGLA) ದೇಶದಲ್ಲಿ ಹಿಂದುಗಳ ಮೇಲೆ ಅಮಾನುಷ ಹಾಗೂ ಬರ್ಬರವಾಗಿ ಕೊಲೆ ಸುಲಿಗೆ ಅತ್ಯಾಚಾರ ಹಾಗೂ ದೇವಸ್ಥಾನಗಳನ್ನು ಭಗ್ನಗೊಳಿಸಿದ ಬಾಂಗ್ಲಾದ ಮುಸ್ಲಿಮರ ನಡೆ ಖಂಡಿಸಿ ಪ್ರತಿಭಟನೆ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾಕಾರರು ಶಂಶುದ್ದೀನ್ ವೃತ್ತ ಸುತ್ತಾಕಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಿಂದೂ ಮುಖಂಡ ಕೃಷ್ಣ ನಾಯ್ಕ ಆಸರಕೇರಿ, ಭಾರತದಲ್ಲಿ ಕೋಟ್ಯಂತರ ಬಾಂಗ್ಲಾ ಮುಸ್ಲಿಮರು ನುಸುಳಿಕೊಂಡು ವಾಸ ಮಾಡುತ್ತಿದ್ದಾರೆ. ಅವರನ್ನು ಓಡಿಸಲು ನಮಗೆ ಬಂದೂಕು ಅಥವಾ ತಲ್ವಾರ್ ಹಿಡಿದುಕೊಳ್ಳುವ ಅವ್ಯಶಕತೆ ಇಲ್ಲ. ದೊಣ್ಣೆ ಮತ್ತು ಪೊರಕೆ ಹಿಡಿದುಕೊಂಡು ಓಡಿಸಲು ಶುರು ಮಾಡಿದರೆ ಅವರಿಗೆ ವಾಸವಿರಲು ಎಲ್ಲಿಯೂ ಕೂಡ ಜಾಗವಿರಲ್ಲ, ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಮಹಿಳೆಯರಿಗೆ ತುಂಬಾ ಸಂಯಮ, ಶಕ್ತಿ ದೇವರು ನೀಡಿದ್ದಾನೆ. ಮಹಿಳೆ ಶಾಂತ ಸ್ವರೂಪವಾಗಿಯೂ ಇರಬಹುದು. ಹಾಗೆಯೇ ಎದುರಿಸಿ ನಿಂತಾಗ ಕಾಳಿಯಂತೆ ಖಡ್ಗ ಹಿಡಿದು ಮುಂದೆ ಬರಬಹುದು ಎನ್ನುವುದಕ್ಕೆ ಸದ್ಯ ಬಾಂಗ್ಲಾ ದೇಶದ ಹಿಂದೂ ಮಹಿಳೆಯರು ಬೀದಿಗೆ ಇಳಿದಿರುವುದು ಉದಾಹರಣೆ ಎಂದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, ಬಾಂಗ್ಲಾದೇಶದಲ್ಲಿ ಯಾವ ರೀತಿ ಮಾರಣಹೋಮ ನಡೆದಿದೆ ಎನ್ನುವುದು ನಮ್ಮ ಕಣ್ಣ ಮುಂದೆ ಇದೆ. ಆದರೆ ಎಷ್ಟೋ ಇಂತಹ ಘಟನೆಗಳನ್ನು ಇತಿಹಾಸದಲ್ಲಿ ಮುಚ್ಚಿ ಹಾಕಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಿಂದಾಗಿ ಹಾಗೂ ನಮ್ಮಲ್ಲಿರುವ ಹಿಂದುತ್ವದ ಶಕ್ತಿಯಿಂದಾಗಿ ಇತಿಹಾಸ ಒಂದೊಂದಾಗಿ ಹೊರ ಬರುತ್ತಿದೆ. ಈ ಘಟನೆಯಿಂದ ನಾವೆಲ್ಲ ಎಚ್ಚೆತ್ತುಕೊಳ್ಳದೇ ಇದ್ದರೆ ಇಂದು ಬಾಂಗ್ಲಾದೇಶಕ್ಕೆ ಆಗಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಭಾರತಕ್ಕೂ ಆಗುವುದರಲ್ಲಿ ಯಾವ ಸಂದೇಹವಿಲ್ಲ ಎಂದರು.
ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ರಾಮಕೃಷ್ಣ ನಾಯ್ಕ ಮಾತನಾಡಿ, ಬಾಂಗ್ಲಾದೇಶ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಅಲ್ಲಿನ ಹಿಂದುಗಳನ್ನು ಮತಾಂಧರು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ಅಲ್ಲಿನ ಮಾತೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಿದ್ದಾರೆ. ಆದರೆ ದುರಾದೃಷ್ಟ ಏನೆಂದರೆ ಅಲ್ಲಿ ಗಾಯಗೊಂಡ ಹಿಂದುಗಳಿಗೆ ಚಿಕಿತ್ಸೆ ನೀಡಲು ಅಲ್ಲಿನ ಆಸ್ಪತ್ರೆಗಳು ಹಿಂಜರಿಯುತ್ತಿವೆ. ಇದು ನಮಗೆಲ್ಲ ಎಚ್ಚರಿಕೆಯ ಗಂಟೆಯಾಗಿದೆ. ಬಾಂಗ್ಲಾದಲ್ಲಿ ಕಳೆದ ಎಪ್ಪತ್ತು ವರ್ಷದಲ್ಲಿ ಶೇ. 30ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಏಳರಿಂದ ರಿಂದ ಎಂಟಕ್ಕೆ ಇಳಿಕೆಯಾಗಿದೆ. ಎಲ್ಲೆಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಅಲ್ಲಲ್ಲಿ ಜಿಹಾದಿ ಹಾಗೂ ಮತಾಂಧರ ಆರ್ಭಟ ಹೆಚ್ಚಾಗುತ್ತಾ ಹೋಗಲಿದೆ.