ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ(Newdelhi): ಪಾಕಿಸ್ತಾನದ ಉಗ್ರರ(Pakistan terror) ಕುಕೃತ್ಯಕ್ಕೆ ಅಮಾಯಕ ಪ್ರವಾಸಿಗರ ಬಲಿಯಾಗಿರೋದಕ್ಕೆ ಭಾರತೀಯ ಸೇನೆ(Imdian Army) ತಕ್ಕ ಉತ್ತರ ನೀಡಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನಿ ಉಗ್ರರ ನೆಲೆಗಳನ್ನು ದ್ವಂಸಗೊಳಿಸಲಾಗಿದೆ.
.
ಭಾರತೀಯ ಸೇನೆ(Indian Army) ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 21 ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ್ದು. ನೂರಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ. ಮಾಹಿತಿಯ ಪ್ರಕಾರ ವೈಮಾನಿಕ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ನ ಕುಟುಂಬದ (Masood Azar Family) 10 ಸದಸ್ಯರು ಮತ್ತು ನಾಲ್ವರು ಆಪ್ತರನ್ನು ಹತ್ಯೆಗೈಯ್ಯಲಾಗಿದೆ.
ಹಫೀಜ್ ಮಸೂದ್ ಅಜರ್ ನಿಷೇಧಿತ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಸ್ಥಾಪಕ ಮತ್ತು ಮುಖ್ಯಸ್ಥ. ಸತ್ತವರಲ್ಲಿ ಮಸೂದ್ ಅಜರ್ನ ಪತ್ನಿ, ಪುತ್ರ, ಸಹೋದರ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ವೂಫ್ ಅಸ್ಕರ್ನ ಪುತ್ರ ಹುಜೈಫಾ ಇದ್ದಾರೆ. ರವೂಫ್ ಅಸ್ಲರ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪಾಕಿಸ್ತಾನದ ಪತ್ರಿಕೆ ಡೇಲಿ ಉರ್ದು (Daily Urdu Paper) ಪತ್ರಿಕೆ ವರದಿ ಮಾಡಿದೆ.
ಇದನ್ನು ಓದಿ : ಪಾಕ್ ಭಯೋತ್ಪಾದಕ ನೆಲೆ ಮೇಲೆ ವಾಯು ಸೇನೆ ಅಟ್ಯಾಕ್. 100ಕ್ಕೂ ಹೆಚ್ಚು ಉಗ್ರರು ಮಟಾಷ್.