ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi): ಉತ್ತರಕನ್ನಡ ಜಿಲ್ಲೆಯ ಶಿರಸಿಯ ವ್ಯಕ್ತಿಯೋರ್ವರಿಗೆ  ಕೆಎಪ್ಡಿ ದೃಢಪಟ್ಟಿದೆ. ತಾಲೂಕಿನ ಬಲವಳ್ಳಿ ಭಾಗದ ವ್ಯಕ್ತಿಯೋರ್ವನಿಗೆ ಮಂಗನ ಖಾಯಿಲೆ ಇರುವುದು ಖಚಿತವಾಗಿದೆ.

ಫೆಬ್ರವರಿ 20ರಂದು 51 ವರ್ಷದ ವ್ಯಕ್ತಿಗೆ  ಜ್ವರ ಹಾಗೂ ಮೈಕೈ ನೋವು, ತಲೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ರೇವಣಕಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದ್ದರು. ಶಂಕೆ ವ್ಯಕ್ತಪಡಿಸಿದ ವೈದ್ಯರು ಅವರ ರಕ್ತ ಮಾದರಿಯನ್ನು ಶಿವಮೊಗ್ಗದ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿದ್ದರು. ರಕ್ತ ಮಾದರಿಯಲ್ಲಿ ಕೆಎಫ್ ಡಿ ಖಾಯಿಲೆ ಇರೋದು ಗೊತ್ತಾಗಿದೆ.

ಸದ್ಯ ಪಂಡಿತ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ  ಮಾಹಿತಿ ನೀಡಿದ್ದಾರೆ.

1956ರಲ್ಲಿ ಶಿವಮೊಗ್ಗ ಜಿಲ್ಲೆಯ  ಕ್ಯಾಸನೂರಿನಲ್ಲಿ ಮೊದಲು ಕಾಣಿಸಿಕೊಂಡ ಮಂಗನ ಖಾಯಿಲೆ ಸಿದ್ದಾಪುರ, ಸಾಗರ, ಹೊನ್ನಾವರ ಭಾಗದಲ್ಲಿ ಹೆಚ್ಚಾಗಿತ್ತು. ಇದೀಗ ಶಿರಸಿ ಭಾಗದಲ್ಲಿ ಪ್ರಥಮ ಪ್ರಕರಣ ದಾಖಲಾಗಿದ್ದರಿಂದ ಜನತೆ ಆತಂಕಗೊಳ್ಳುವಂತಾಗಿದೆ.

ಇದನ್ನು ಓದಿ : ಕೇಣಿ ಮತ್ತು ಕಾಸರಕೋಡು ಗ್ರಾಮದಲ್ಲಿ ನಿಷೇದಾಜ್ಞೆ ಮುಂದುವರಿಕೆ

ಪೊಲೀಸ್ ಸರ್ಪಗಾವಲಿನ ನಡುವೆ ಸರ್ವೆ. ನಿಷೇದಾಜ್ಞೆ ನಡುವೆ ನಾಗರಿಕರ ಬೃಹತ್ ಪ್ರತಿಭಟನೆ.