ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಲಬುರಗಿ (Kalaburagi ) :  ರಾಜಕಾರಣಿಗಳು, ಉದ್ಯಮಿಗಳು ಹನಿಟ್ರ್ಯಾಪ್(Honeytrap) ಖೆಡ್ಡಾಕ್ಕೆ ಬಿದ್ದಿರೋ ಸುದ್ದಿ ಕೇಳಿದ್ದೇವೆ.  ಖತರ್ನಾಕ್ ಮಹಿಳೆಯೊಬ್ಬಳು ಪೊಲೀಸ್ ಕಾನ್ಸಟೇಬಲ್‌ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ.

ಪೂಜಾ ಡೊಂಗರಗಾಂವ್ ಎಂಬಾಕೆ ಕಲಬುರಗಿಯ(Kalaburagi) ಸೆನ್ ಪೊಲೀಸ್ ಠಾಣೆಯ(CEN Police Station) ಕಾನ್ಸ್ ಟೇಬಲ್‌ನನ್ನು  ಸ್ನೇಹ ಬೆಳೆಸಿ ಹನಿಟ್ರ್ಯಾಪ್ (Honeytrap) ಖೆಡ್ಡಾಗೆ ಕೆಡವಿದ್ದಾಳೆ. ಆ ಬಳಿಕ ಕಾನ್ಸಟೇಬಲ್‌ ಪತ್ನಿಯಿಂದ ಎಂಟು ಲಕ್ಷ ಹಣ ವಸೂಲಿ ಮಾಡಿದ್ದಾಳಂತೆ. ಆರೋಪಿ ಪೂಜಾ ಡೊಂಗರಗಾಂವ್ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್‌ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.

ಪೂಜಾ ಮತ್ತು ಅಮರ್ ಸಿಂಗ್ ಎಂಬುವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣ ವಸೂಲಿ ಮಾಡಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಕಲಬುರಗಿಯಲ್ಲಿಯೇ ನಡೆದ ಮತ್ತೊಂದು  ಹನಿಟ್ರ್ಯಾಪ್ ಪ್ರಕರಣದಲ್ಲೂ ಈ ಪೂಜಾ ಭಾಗಿಯಾಗಿದ್ದಳು.  ಪ್ರಕರಣದಲ್ಲಿ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿಗಳಾಗಿದ್ದರು. ಆರೋಪಿಗಳು ಹನಿಟ್ರ್ಯಾಪ್​ ಮೂಲಕ ಉದ್ಯಮಿ ವಿನೋದಕುಮಾರ ಖೇಣಿ ಅವರಿಂದ 34 ಲಕ್ಷ ರೂ. ದೋಚಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಾಜು ಲೇಂಗಟಿ, ಪ್ರಭು ಹಿರೇಮಠ ಸೇರಿಂದತೆ ಏಳು ಜನರ ವಿರುದ್ಧ ದೂರು ದಾಖಲಾಗಿತ್ತು.

ಇದನ್ನು ಓದಿ : ಗೀತಾ ಪ್ರಕರಣ. ಕೊಲೆ ಆರೋಪಿಯಿಂದ ಭರ್ಜರಿ ಬಾಡೂಟ .

ಉತ್ತರಕನ್ನಡದ ಸಂಧ್ಯಾ, ಆನಂದ, ಸಂದೀಪ ಸೇರಿ ಹಲವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ.

ಮಗಳ ಮೇಲೆ ಅತ್ಯಾಚಾರ. ರೋಸಿ ಹೋದ ಪತ್ನಿಯಿಂದ ಪತಿ ಫಿನೀಶ್.

ಬಸ್ ದರ ಏರಿಸಿ ಪುರುಷರಿಗೆ ಬರೆ ಎಳೆಯಲು ಮುಂದಾದ ಸರ್ಕಾರ.