ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಲಂಚ ಪಡೆಯುವ ವೇಳೆ ನಗರ ಯೋಜಕ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಾನಂದ ತಾಮ್ರೆಣ್ಣನವರ  ಬಲೆಗೆ ಅಧಿಕಾರಿ. ಶುಕ್ರವಾರ ಸಂಜೆ ಈ ದಾಳಿ ನಡೆದಿದೆ. ಕಾರವಾರದ ಕನ್ಸಲ್ಟ ಇಂಜಿನಿಯರ್ ಪ್ರಶಾಂತ್ ನಾಯ್ಕ ಎಂಬುವವರಿಂದ ಬಿಲ್ಡಿಂಗ್ ಅಪ್ರೂವಲ್ ಪಡೆಯಲು ಜನವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸ ಮಾಡಿಕೊಡಲು ನಗರ ಯೋಜಕ ಸದಸ್ಯ ಶಿವಾನಂದ ತಾಂಮರೆಣ್ಣನವರ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪ್ರಶಾಂತ್ ಲೋಕಾಯುಕ್ತರಿಗೆ ದೂರು ಸಲ್ಲಿಸಿ ಇಂದು ಹಣ ನೀಡಲು ಮುಂದಾಗಿದ್ದರು.

ಸಂಜೆ ಕಚೇರಿಯಲ್ಲಿಯೇ 10ಸಾವಿರ ರೂ ಹಣ ಪಡೆಯುವ ವೇಳೆ  ಲೋಕಾಯುಕ್ತರು ದಾಳಿ  ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ ಇತರೆ ಅಧಿಕಾರಿಗಳು ಸಿಬ್ಬಂದಿಗಳು ದಾಳಿ ನಡೆಸಿದ್ದು ಲಂಚ ಬಾಕ ಅಧಿಕಾರಿಯ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ : ತೆರವುಗೊಳಿಸುವ ವೇಳೆ ಎದ್ದು ನಿಂತ ಕಾಳಿ ಸೇತುವೆಯ ಸ್ಲ್ಯಾಬ್