ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ವಿಪರೀತ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದ ಯುವಕನೋರ್ವ ಆನ್ಲೈನ್ ಗೇಮ್ ನಲ್ಲಿ(Online Game) ಸಾಕಷ್ಟು ಹಣ ಕಳೆದುಕೊಂಡ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಪಾಶಾಣ ಬೆರೆಸಿ ತಿಂದು ಸಾವನ್ನ ಪ್ಪಿದ ಘಟನೆ ನಡೆದಿದೆ.
ಮಹ್ಮದ್ ನಿಹಾಲ್ (19) ಎಂಬಾತನೆ ಪ್ರಾಣ ಕಳೆದುಕೊಂಡವ. ನಗರದ ಸಾಗರ ರಸ್ತೆಯಲ್ಲಿರುವ(Sagara Road) ಶ್ರೀ ಗುರು ಸುಧೀಂದ್ರ ಕಾಲೇಜಿನ ಹಿಂಭಾಗದ ಮಹ್ಮದ್ ನಿಹಾಲ್ ಕಾಲೇಜಿಗೆ ಹೋಗುತ್ತಿದ್ದು ವಿಪರೀತ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದ ಈತ ಕಳೆದ ಮೂರು ವರ್ಷಗಳಿಂದ ಮೊಬೈಲ್ ಮೂಲಕ ವಿವಿಧ ಗೇಮ್(Game) ಆಡುವುದನ್ನು ರೂಢಿಸಿಕೊಂಡಿದ್ದ. ಹಣ ಹೂಡಿ ಮೊಬೈಲ್ ಗೇಮ್(Mobile Game) ಆಡುವುದನ್ನು ಚಟವನ್ನಾಗಿಸಿಕೊಂಡಿದ್ದರಿಂದ ಸಾಕಷ್ಟು ಪ್ರಮಾಣದ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ.
ಮೊಬೈಲ್ ಮಾಯೆಯೊಳಗೆ ಸಿಲುಕಿ ಸಾಕಷ್ಟು ಹಣ ಕಳೆದುಕೊಂಡ ಪರಿಣಾಮ ಮಹ್ಮದ್ ನಿಹಾಲ್ ಮಾನಸಿಕವಾಗಿ ಕುಗ್ಗಿದ್ದ. ಹೀಗಾಗಿ ಶಿವಮೊಗ್ಗದ ಮಾನಸ ಆಸ್ಪತ್ರೆಗೆ(Shimoga Manasa Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೊಬೈಲ್ ವ್ಯಾಮೋಹದಿಂದ ಹೊರ ಬರದ ಈತ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಅಸ್ವಸ್ಥನಾಗಿದ್ದಾನೆ. ತಕ್ಷಣ ಮನೆಯವರು ಆತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ್ ಆಸ್ಪತ್ರೆಗೆ (Manipal Hospital) ಕರೆದೊಯ್ದಿದ್ದರು. ಏಪ್ರಿಲ್ 13ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಉಮ್ಮರ್ ಫಾರೂಖ್ ಎನ್ನುವವರು ದೂರು ದಾಖಲಿಸಿದ್ದಾರೆ.
ಇದನ್ನು ಓದಿ : ಸಾಯಿಮಂದಿರ ಕಳ್ಳತನ ಮಾಡಿದ್ದು ಇಬ್ಬರಲ್ಲ ನಾಲ್ವರು? ಗೋವಾದಲ್ಲಿ ಬೆಳ್ಳಿಯ ಕೊಡೆ ಪತ್ತೆ.
ಮುಖ್ಯಮಂತ್ರಿ ಭೇಟಿ ಮಾಡಿದ ಮೀನುಗಾರರ ನಿಯೋಗ. ಹೊನ್ನಾವರ ಮತ್ತು ಕೇಣಿ ಯೋಜನೆ ಬಗ್ಗೆ ಚರ್ಚೆ.