ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಟೊಂಕ, ಅಂಕೋಲಾದ ಕೇಣಿ ಸೇರಿ ಮಹಾರಾಷ್ಟ್ರದಲ್ಲಿ ಆಗುತ್ತಿರುವ ಖಾಸಗಿ ವಾಣಿಜ್ಯ ಬಂದರು ವಿರೋಧಿಸಿ ರಾಷ್ಟ್ರೀಯ ಮೀನುಗಾರ ಕಾರ್ಮಿಕ ವೇದಿಕೆಯಿಂದ(Fisherman forum) ಲೋಕಸಭೆ ಅಧಿವೇಶನದ ವೇಳೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ರಾಷ್ಟ್ರೀಯ ಅಧ್ಯಕ್ಷ, ಮಹಾರಾಷ್ಟ್ರದ ಮೀನುಗಾರ ಮುಖಂಡ ರಾಮಕೃಷ್ಣ ತಾಂಡೇಲ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ್ದಾರೆ. ಕೇರಳ(Keral), ಮಹಾರಾಷ್ಟ್ರದಲ್ಲಿ (Maharashtra) ವಾಣಿಜ್ಯ ಖಾಸಗಿ ಬಂದರು (Commercial Port) ನಿರ್ಮಾಣಕ್ಕೆ ವಿರೋಧ ಇದೆ. ಅದೇ ರೀತಿ ಉತ್ತರಕನ್ನಡ(Uttarakannada) ಜಿಲ್ಲೆಯಲ್ಲಿ ಟೊಂಕ(Tonka), ಕೇಣಿ(Keni) ಮತ್ತು ಕಾರವಾರ ಬಂದರು(Karwar Port) ಯೋಜನೆ ವಿರೋಧಿಸಿ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಹಕಾರದಿಂದ ಸಿಎಂ ಸಿದ್ದರಾಮಯ್ಯ(Cm Siddaramaiha) ಅವರನ್ನು ಭೇಟಿ ಮಾಡಿದ್ದೇವೆ. ಮುಂದಿನ 15 ದಿನದಲ್ಲಿ ಸಭೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಒಂದು ವೇಳೆ ಮೀನುಗಾರರಿಗೆ ಸರಿಯಾದ ಸ್ಪಂದನೆ ಸಿಗದೆ ಇದ್ದರೆ ದೆಹಲಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

ವೇದಿಕೆಯ ಸಂಯೋಜಕ ವಿಕಾಸ ತಾಂಡೇಲ ಮಾತನಾಡಿ,  ಭಟ್ಕಳದಿಂದ ಗೋವಾದವರೆಗೆ (Bhatkal to Goa) ಕರಾವಳಿ ಬಂದರು(Coastal Port) ವ್ಯಾಪ್ತಿ ಎಂದು ಘೋಷಣೆ ಮಾಡಲಾಗಿದೆ. ಆದರೆ ಬಳಕೆದಾರರ ಕೇಳದೆ ಘೋಷಣೆ ಮಾಡಿದ್ದು ತಪ್ಪು, ಕೂಡಲೇ ಅದನ್ನು ರದ್ದು ಮಾಡಬೇಕು. ಉತ್ತರಕನ್ನಡ ಜಿಲ್ಲೆಯು ಯೋಜನೆಗಳಿಂದ ಈಗಾಗಲೇ ಧಾರಣಾ ಶಕ್ತಿ ಕಳೆದುಕೊಂಡಿದೆ. ಬೇಡದ ಯೋಜನೆಗಳನ್ನು ಇಲ್ಲಿಗೆ ತಂದು ಜಿಲ್ಲೆಯನ್ನು ಕಸದ ತೊಟ್ಟಿ ಮಾಡುತ್ತಿದ್ದಾರೆ. ಹಾಗಾಗಿ ಬಂದರು ಯೋಜನೆ ವಿರೋಧಿಸುತ್ತಿದ್ದೇವೆ ಎಂದರು.

ವಾಣಿಜ್ಯ ಬಂದರು ಯೋಜನೆ ಹೋರಾಟಗಾರರ ಮೇಲೆ ದಾಖಲಿಸಿರುವ ಕೊಲೆ ಯತ್ನ ಕೇಸ್ ಸೇರಿ ಎಲ್ಲವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಅವರು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡುತ್ತೇವೆ ಎಂದರು.

ವೇದಿಕೆ ಪ್ರಧಾನ ಕಾರ್ಯದರ್ಶಿ, ಮೀನುಗಾರ ಮುಖಂಡ ಅಲೆನ್ಸಿಯೋ ಸೀಮೊಯ್ಸ್ ಮಾತನಾಡಿ, ದೇಶದಲ್ಲಿ ಸಂಪೂರ್ಣ ಕರಾವಳಿಯಲ್ಲಿ ಅದಾನಿಗಾಗಿ ಬಂದರು ನಿರ್ಮಾಣವಾಗುತ್ತಿವೆ. ಗೋವಾದಲ್ಲಿ ಪೂರ್ತಿ ಕರಾವಳಿ ತೀರವನ್ನು ಬಂದರು ವ್ಯಾಪ್ತಿ ಎನ್ನುತ್ತಿದ್ದಾರೆ. ಇಲ್ಲಿ ಮೀನುಗಾರರ ಚಟುವಟಿಕೆಗಳೂ ಅಕ್ರಮ ಎನ್ನುತ್ತಿದ್ದಾರೆ. ಆದರೆ ಪ್ರಶ್ನಿಸಿದರೆ ಲೀಸ್ ಪಡೆಯಬೇಕು ಎನ್ನುತ್ತಾರೆ. ಮೊದಲು ಮೀನುಗಾರರಿಗೆ ಕೊಡುವ ಕರಾವಳಿ ಹಕ್ಕು ಕಾಯ್ದೆ ಜಾರಿ ಮಾಡಿ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಮೀನುಗಾರ ಕಾರ್ಮಿಕರ ವೇದಿಕೆಯ ಮಹಾರಾಷ್ಟ್ರ ರಾಜ್ಯದ ಮುಖಂಡೆ ಉಜ್ವಲಾ ಪಾಟೀಲ, ಲಕ್ಷೀ ಟಿ.,  ಸಂಜೀವ ಬಲೆಗಾರ, ಚಂದ್ರಕಾಂತ ತಾಂಡೇಲ, ರೋಹಿದಾಸ್ ಬಾನಾವಳಿ ಸೇರಿ ಮತ್ತಿತರರು ಹಾಜರಿದ್ದರು.

ಇದನ್ನು ಓದಿ: ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ. ಪಾನಿಪುರಿ ಜೊತೆ ಪಾಷಾಣ ತಿಂದ.

ಸಾಯಿಮಂದಿರ ಕಳ್ಳತನ ಮಾಡಿದ್ದು ಇಬ್ಬರಲ್ಲ ನಾಲ್ವರು? ಗೋವಾದಲ್ಲಿ ಬೆಳ್ಳಿಯ ಕೊಡೆ ಪತ್ತೆ.