ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ನಗರದ ಸಾಯಿಕಟ್ಟಾದ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಸಾಯಿ ಮಂದಿರದಲ್ಲಿ(Sai Mandira) ಕಳ್ಳತನವಾದ ಬೆಳ್ಳಿಯ ಕೊಡೆ ಗೋವಾದ(Goa) ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ(Vasco Railway Station) ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ವಾಸ್ಕೊ ರೈಲ್ವೆ ಪೊಲೀಸರು ಇದನ್ನು ಪತ್ತೆ ಮಾಡಿದ್ದು, ಕಳ್ಳರ ಸುಳಿವು(Theives Clue) ಕೂಡ ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ. ಮಂಗಳವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸಾಯಿಕಟ್ಟಾ ಸಾಯಿಮಂದಿರದಲ್ಲಿ(SaiKatta Sai Mandira) ಕಳ್ಳತನ ನಡೆದಿತ್ತು. ಈ ವೇಳೆ ದೇವರ ಬೆಳ್ಳಿ ಕೊಡೆ, ಪಾದುಕೆ, ಪ್ರಭಾವಳಿ ಸೇರಿದಂತೆ ಸುಮಾರು 12 ಕೆಜಿಗೂ ಅಧಿಕ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ನಾಲ್ವರು ಆರೋಪಿಗಳು ಕೃತ್ಯ ಎಸಗಿದ್ದರು. ಇಬ್ಬರ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇನ್ನಿಬ್ಬರು ಹೊರಭಾಗದಲ್ಲಿ ಇದ್ದರು. ಆದರೆ ಕಳ್ಳತನ ಮಾಡಿ ವಸ್ತುಗಳನ್ನ ಓಯ್ಯುವಾಗ ನಾಲ್ವರ ದೃಶ್ಯ ಮಾರ್ಗ ಮಧ್ಯೆದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನ ನಡೆದ ದಿನವೇ ಸಂಜೆ ವೇಳೆ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ 5.3 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿಯ ಕೊಡೆ ಕಂಡುಬಂದಿತ್ತು. ರೈಲ್ವೇ ಪೊಲೀಸರು ಎಂದಿನಂತೆ ಗಸ್ತು ತಿರುಗುತ್ತಿದ್ದಾಗ ಒಂದು ಬೆಡ್ಶೀಟ್ನಲ್ಲಿ ಸುತ್ತಿದ್ದ, ಅನಾಥವಾಗಿ ಬಿದ್ದಿದ್ದ ಬ್ಯಾಗ್ ಅನ್ನು ಗಮನಿಸಿದ್ದರು. ಅದರೊಳಗಿನ ವಸ್ತುಗಳನ್ನು ಪರಿಶೀಲಿಸಿದಾಗ, ಬಿಳಿ ಲೋಹದ ವಸ್ತು ಇರುವುದು ಗೊತ್ತಾಗಿದೆ.
ಸ್ಥಳಕ್ಕೆ ಧಾವಿಸಿದ ಚಿನ್ನದ ವ್ಯಾಪಾರಿ ಪರೀಕ್ಷಿಸಿದ ನಂತರ, ಈ ವಸ್ತು 87.50% ಶುದ್ದ ಬೆಳ್ಳಿಯಿಂದ ಮಾಡಲ್ಪಟ್ಟ ಸಾಂಪ್ರದಾಯಿಕ ದೇವರ ಕೊಡೆ ಎಂದು ದೃಢಪಡಿಸಿದರು. ಇದರ ತೂಕ ಸುಮಾರು 6.4 ಕೆಜಿಯಿದ್ದು, ಸುಮಾರು 25,37,600 ರೂ. ಮೌಲ್ಯದ್ದಾಗಿದೆ ಎಂದು ಅಂದಾಜು ಮಾಡಲಾಗಿದೆ.
ಇನ್ನು ಇದೇ ವೇಳೆ ಈ ವಿಚಾರ ಕಾರವಾರ ಪೊಲೀಸರ ಗಮನಕ್ಕೆ ಬಂದಿದ್ದು ಪರಿಶೀಲನೆ ನಡೆಸಿದಾಗ ಇದು ನಗರದ ಸಾಯಿ ಮಂದಿರದಲ್ಲಿಯೇ ಕದ್ದ ದೇವರ ಕೊಡೆ ಎನ್ನುವುದು ಖಚಿತವಾಗಿದೆ.
ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿ ಕಳ್ಳರು ಎತ್ತ ಸಾಗಿದ್ದಾರೆ ಎನ್ನುವ ಮಾಹಿತಿ ಪಡೆದು ಬಂಧಿಸಲು ಜಾಡು ಬೀಸಿದ್ದು ಶೀಘ್ರದಲ್ಲಿಯೇ ಕಳ್ಳರನ್ನು ಸೆರೆಹಿಡಿಯುವ ಸಾಧ್ಯತೆ ಇದೆ.
ಕಾರವಾರ ಪೊಲೀಸರು(Karwar Police) ಗೋವಾದ ರೈಲ್ವೆ ನಿಲ್ದಾಣಕ್ಕೆ (Goa Railway Station) ಧಾವಿಸಿ ದೇವರ ಬೆಳ್ಳಿ ಕೊಡೆ ಪರಿಶೀಲಿಸಿದ್ದಾರೆ. ಆರೋಪಿತರು ಈ ಹಿಂದೆಯೂ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಾ ಬಂದಿದ್ದು ದೆಹಲಿಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣ ಮಾಡಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಸಂಚರಿಸಿದ ರೈಲುಗಳ ಮಾಹಿತಿ ಪಡೆದು ಯಾವ ಕಡೆ ಹೋಗಿರಬಹುದು ಎನ್ನುವ ಮಾಹಿತಿಯನ್ನು ಸಹ ಕಲೆ ಹಾಕುತ್ತಿದ್ದು ಬೇರೆ ರಾಜ್ಯದ ಪೊಲೀಸರ ಸಹಾಯ ಪಡೆದು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನು ಓದಿ : ಮುಖ್ಯಮಂತ್ರಿ ಭೇಟಿ ಮಾಡಿದ ಮೀನುಗಾರರ ನಿಯೋಗ. ಹೊನ್ನಾವರ ಮತ್ತು ಕೇಣಿ ಯೋಜನೆ ಬಗ್ಗೆ ಚರ್ಚೆ.