ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉಡುಪಿ(Udupi): ಮಲ್ಪೆ ಬಂದರಿನಲ್ಲಿ ಮಹಿಳೆಯನ್ನ ಮರಕ್ಕೆ ಕಟ್ಟಿ ಹಲ್ಲೆ ಘಟನೆಯನ್ನು ಮಹಿಳಾ ಆಯೋಗ ಖಂಡಿಸಿದೆ.
ಮಹಿಳೆ ಮೇಲಿನ ಅಮಾನುಷ ಕೃತ್ಯವನ್ನ ಗಂಭೀರವಾಗಿ ಪರಿಗಣಿಸಿದ ಆಯೋಗ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಎಸ್ಪಿ ಗೆ ಸೂಚಿಸಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀ, ಸುಂದರ್, ಶಿಲ್ಪಾ, ಚಂದ್ರ ಎಂಬವರು ಬಂಧಿತರು. ಹಲ್ಲೆ ಘಟನೆ ವೀಡಿಯೋ ಆಧರಿಸಿ ಮತ್ತಷ್ಟು ಮಂದಿಯನ್ನ ವಶಕ್ಕೆ ಪಡೆಯುತ್ತೇವೆಂದ ಎಸ್ಪಿ ಅರುಣ್ ತಿಳಿಸಿದ್ದಾರೆ. ಕಳೆದ ಮೂರು ವರ್ಷದಿಂದ ವಿಜಯನಗರ ಮೂಲದ ಮಹಿಳೆ ಮೀನು ಮಾರಾಟ ಮಾಡುತ್ತಿದ್ದಳು. ತನ್ನೂರಿಗೆ ಹೋಗುವ ದಾವಂತದಲ್ಲಿ ಟೋಕನ್ ಪಡೆಯದೆ ಸಿಗಡಿ ಮೀನು ತೆಗೆದುಕೊಂಡು ಮಹಿಳೆ ಮುಂದಾಗಿದ್ದಳು. ಇದನ್ನ ಗಮನಿಸಿದ ಇತರೆ ಮೀನುಗಾರರು ಆಕೆಯನ್ನು ಹಿಡಿದು ಪ್ರಶ್ನಿಸಿದ್ದಾರೆ. ಅಲ್ಲದೇ ಕದ್ದ ಆರೋಪದಡಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿ ಪೈಶಾಚಿಕ ಕೃತ್ಯ ನಡೆಸಿದ್ದರು.
ಈ ಘಟನೆ ರಾಜ್ಯಾದ್ಯಾಂತ ಮಲ್ಪೆ ಮೀನುಗಾರರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನು ಓದಿ : ಕಾರವಾರದಲ್ಲಿ ಇನ್ಮುಂದೆ ರೆವೆಂಟೊ ಮೆಡ್ ಸ್ಕ್ವೇರ್ ಕ್ಲಿನಿಕ್ ಮತ್ತು ಪಂಚಕರ್ಮ ಸೇವೆ.
ಯುಗಾದಿ ಹಬ್ಬಕ್ಕೆ ಬೆಂಗಳೂರು – ಮುರುಡೇಶ್ವರ ರೈಲು ಕಾರವಾರಕ್ಕೆ ವಿಸ್ತರಣ