ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾಪು(Kapu) : ತಾಲೂಕಿನ ಶಂಕರಪುರ ದುರ್ಗಾ ನಗರದಲ್ಲಿ ಕಾರು ಮತ್ತು ಟಿಪ್ಪರ್(Car and Tipper) ನಡುವೆ ಅಪಘಾತ ಸಂಭವಿಸಿ ಚಾಲಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಕೃಷ್ಣ ನಾಯ್ಕ (55) ಮೃತ ಚಾಲಕನಾಗಿದ್ದು ಕೊಕ್ಕರ್ಣೆ ನಿವಾಸಿ(Kokkarni) ಎಂದು ಗುರುತಿಸಲಾಗಿದೆ. ಶಿರ್ವದಿಂದ ಕಟಪಾಡಿ(Shirva to Katpadi) ಕಡೆಗೆ ಬರುತ್ತಿದ್ದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗುಚಿಬಿದ್ದ ಟಿಪ್ಪರ್ ನಿಂದ ಚಾಲಕ ಹೊರಕ್ಕೆ ಹಾರಿ ಬಿದ್ದಿದ್ದಾರೆ. ಪರಿಣಾಮ ಟಿಪ್ಪರ್ನ ಅಡಿಗೆ ಬಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅತಿ ವೇಗದ ಚಾಲನೆಯಿಂದ(Over Drive) ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಿರ್ವ ಪೊಲೀಸ್ ಠಾಣಾ(Shirva police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : “ನೀ ಬರೆಸಿದಂತೆ” ಹಣವನ್ನ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮಾದರಿಯಾದ ದಂಪತಿ.
ಕಾರವಾರದಲ್ಲಿ ಎಎಸ್ಐ ಮನೆಗೆ ಕನ್ನ ಹಾಕಿದ ಕಳ್ಳರು.
ತಂದೆಯ ಅಂತ್ಯಕ್ರಿಯೆಗೆ ಮೃತದೇಹ ಇಬ್ಬಾಗಿಸಿ ಕೊಡಿ. ವಿಚಿತ್ರ ಬೇಡಿಕೆಯಿಟ್ಟ ಪುತ್ರ.